ಸುಳಾದಿ (ಪ)
||ಮಟ್ಟತಾಳ||
ಪುಂಡರೀಕ ನಯನೆ ಪುಂಡರೀಕಗಮನೆ | ಪುಂಡರೀಕ ವಾಣಿ ಪುಂಡರೀಕಪಾಣಿ |
ಅಂಡಜ ಶಿಖರಥಳೆ ಅಂಡಜ ಸುತವಹಳೆ | ಪಂಡರ ಅಭಿನವ ಪ್ರಾಣೇಶ ವಿಠಲನ |
ಬಂಡುಣಿ ಎನಿಸು ಮಧ್ವದನದೊಳು ನೆಲೆಸು ||
||ಮಟ್ಟತಾಳ||
ಪರಿಸರ ನೀನಿರಲು ಹರಿ ತಾನಿರುತಿಹನು | ಇರದಿರೆ ತಾನಿರನು ಈ ನುಡಿಶೃತಿ ಸಿದ್ಧ |
ಕರಣ ನಿಯಾಮಕನೆ | ನೀದಯ ತೋರಲು ಕರುಣಿಸುವನು ಶ್ರೀಶ ಹೀಗಿದೆ
ಸಿದ್ಧಾಂತ | ಸುರವಂದ್ಯ ಅಭಿನವ ಪ್ರಾಣೇಶ ವಿಠಲನ | ಚರಣದೂಳಿಗಕಾರ
ಗುರು ವೃಕೋದರನೆ ||
||ತಾಳ ಅಟ್ಟ||
ಪತಿತಮಾನವಾಗಿ ಸತತ ದುರ್ವಿಷಯದಿ | ರತನಾಗಿರುವೆ ನಾನು ಕ್ಷಿತಿಯೊಳು
ಖರನಂತೆ | ಅತಿ ಮಂದಮತಿಯಾಗಿ ತೊಳಲುತ್ತಿರುವನೆಯ್ಯ | ವೃತತಿಜಾಸನ
ಕುಲಾಚರಣೆ ತೊರೆದು ಮಧ್ವ | ಮತದ ತತ್ವಗಳ ಮರ್ಮಗಳರಿಯದೆ |
ಪತಿತಮಾನವನಾದೆ ಸಲಹಯ್ಯ ಸಲಹಯ್ಯ | ಪತಿತ ಪಾವನನೆಂಬ ಬಿರುದು
ನಿನ್ನದು ದೇವ | ಕೃತಿಪತಿಯಭಿನವ ಪ್ರಾಣೇಶ ವಿಠಲ ||
||ತ್ರಿವಿಡಿತಾಳ||
ಪ್ರಾಣೇಶದಾಸರ ಜ್ಞಾನಭಕ್ತಿಗೆ ವಲಿದು | ಸಾನುರಾಗದಲಿಲ್ಲಿ ನೆಲಿಸಿದ ಗುರುದೇವ |
ಕ್ಷೋಣಿಯೋಳ್ಲಿಂಗಸೂರು ಕರುಣಿಕ ವಂಶವ | ಮಾಣದೆ ಪೊರೆಯಲು ಬಂದ
ಕರುಣಿ | ಆನತ ಜನಮನಾಭಿಷ್ಟವ ಸಲಿಸುವ | ದೀನ ದಯಾಳು ಸಜ್ಜನ
ಗೇಯನ | ಜಾನಕೀಶಾಭಿನವ ಪ್ರಾಣೇಶವಿಠಲನ | ಪ್ರಾಣ ಪದಕನಾದ
ಮೌನಿ ಮಾನದ ದಾನಿ ||
||ಜತೆ||
ಪ್ರಹ್ಲಾದನೇ ವ್ಯಾಸ ಮುನಿಯೇ ರಾಘವೇಂದ್ರ |
ರಹುದೆಂದು ಭಜಿಸಿರೋ ವಿಜಯ ವಿಠಲ ವೊಲಿವಾ ||
||ಮಟ್ಟತಾಳ||
ಪೇರ್ಮೆ ಇಂದಲಿ ವಿಶ್ವಾಕರ್ಮನಿಂದಲಿ ಅಂದು | ನಿರ್ಮಿತವಾಗಿದ್ದ ನಿರ್ಮಲ
ಶರೀರ | ಧರ್ಮಬೋಧಕ ರಾಮಾ ನಿರ್ಮಯನೆ ಚ | ತುರ್ಮೊಗ ನಿತ್ಯ ನಿಷ್ಕರ್ಮ
ಭಾವದಲ್ಲಿ | ನಿರ್ಮತ್ಸರನಾದ ವಿಜಯವಿಠಲರೇಯನ | ನಿರ್ಮಲ ಚಿತ್ತದಲ್ಲಿ
ಅರ್ಚನೆ ಮಾಡಿದನೋ ||
||ಆದಿತಾಳ||
ಪರಗತಿಬೇಕಾದ ಪುರುಷರು ಪರತರ | ಗುರು ಪಾದಾಶ್ರಯ ನಿರತರಾದ ವರ
ಮಂದಿರ | ಬಾಕುಳಿತನ ಧರಿಸಿ ಆದರದಿ ಅವರ | ಪರಿವಾರವನುಸರಿಸಿ ಆಜ್ಞಾ
ಮೀರದತಿ | ಜರಿದಪಹಾಸ ಮಾಡದೆ ಪರಮ ಸಂತೋಷ ತಾಳಿ | ಕೊರಗುವ
ಮಾತಾಡೆ ಕೊರತೆ ಮನಕ್ಕಿಲ್ಲಾದೆ | ಪರಿಚರಿಸುತಲೀರೆ ಪರಮ ಪ್ರೀತಿಯಿಂದ |
ಶಿರಿಗುರು ಅಜಗುರು ಸಕಲ ಜಗದ್ಗುರು | ಶಿರಿ ಬಾದರಾಯಣ ವಿಠಲ |
ಕರುಣದರುಶನ ಕೊಡುವನು ಮನಮಂದಿರದೊಳು ||
||ಆದಿತಾಳ||
ಪರಿಸರ ಶ್ರಿಕುಪ್ಪಿಭೀಮನ ತೇರಿಗೆ | ಎರಡು ಎರಡು ಪಾಷಾಣ ಗಾಲಿಗಳ |
ಗುರು ವರದೇಂದ್ರರಿಗೆ ರಜತ ಕವಚವನ್ನು | ವರ ಜಯತೀರ್ಥರಿಗತಿ ಸುಂದರ
ರಥ | ಗುರು ಮಾನವಿ ಪ್ರಭುವಿಗೆ ತಾತ್ವಿಕರಥ | ನಿರ್ಮಿಸಿ ಶಾಶ್ವತ ಯಶವನ್ನು
ಗಳಿಸಿದೆ | ಶರಧರ ಅಭಿನವ ಪ್ರಾಣೇಶವಿಠಲನ | ಚರಣ ವಾರಿಜ ಭೃಂಗ ದೀನ
ದಯಾಪಾಂಗ||
||ಧೃವತಾಳ||
ಪೂರ್ವಜನ್ಮದ ಸುಕೃತ ಪುಣ್ಯ ಸಾಧನದಿಂದ | ಕಾರ್ಪರಾಧೀಶ ನರಹರಿಯ
ದಯದಿ | ಸರ್ವಜೀವೊತ್ತಮ ಮರುತನ ಕರುಣದಿ | ರಾಘವೇಂದ್ರ ವರದೇಂದ್ರರ
ದಯದಿ | ಧಾರುಣಿನಾಥ ಶ್ರೀ ಮಾನವಿ ಪ್ರಭುಗಳಾ | ಸಾರ ವಾತ್ಸಲ್ಯ ಕರುಣಾ
ಕೃಪಾದಲಿ | ನಾರಸಿಂಹಭಿನವ ಪ್ರಾಣೇಶ ವಿಠಲನ | ಚಾರುದಾಸ್ಯವ ಪಡೆದ
ಶ್ಯಾಮಸುಂದರ ಗುರುವೆ ||
||ಧೃವತಾಳ||
ಪೊಂದಿ ಭಜಿಸು ಸತತ ವಂದೇ ಮನದಿ ಸ್ತಂಭ | ಮಂದಿರ ಮಾನವಿ
ದಾಸಾರ್ಯರಾ | ಮಂದ ಮಾನವ ಕೇಳೋ ವಂದಿಸಿ ಸೇವಿಪರ | ಬಂಧನ
ಪರಿಹರಿಸಿ ಮನದಭೀಷ್ಟಾ | ತಂದು ಕೊಡುವುದಕ್ಕೆ ಮಂದಾರ ಕುಜದಂತೆ|
ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊ | ಛಂದಾಗಿ ಇವರು ದಯದಿ ಕಣ್ದೆರೆದು
ನೋಡಿದರೆ | ಬೆಂದು ಪೋಪವು ದೋಷ ವೃಂದವೆಲ್ಲಾ | ಕಂದನು ಮಾಡಿದ ಕುಂದು
ಕ್ಷಮಿಸಿ ತಾಯಿ | ತಂದೆ ಸಲಹುವಂತೆ ರಕ್ಷಿಸುವರೋ | ಹಿಂದೆ ಪ್ರಹ್ಲಾದ
ಶಲ್ಯನೆಂದೆನಿಸುತ ಪು | ರಂದರ ಗುರು ಸ್ವಾದಿರಾಜರ ಪ್ರೀತಾ | ಸಿಂಧೂರ ವರದ
ಶ್ಯಾಮಸುಂದರನಾಜ್ಞದಿ | ಇಂದುವಿನಂತೆ ಮೂಡಿ ಪುನಹ ಜಗದಿ ||
||ತ್ರಿವಿಡಿತಾಳ||
ಪೃಥ್ವಿಪನರಿಕೆಯ ನಾಲಿಸಿ ಬೇಗನೆ | ಉತ್ತನೂರಿಗೆ ಬಂದು ನೆಲಸಿದನು |
ಚಿತ್ತಜನಯ್ಯನ ಗಿರಿ ವೆಂಕಟೇಶನ | ತುತಿಸುತಾಕ್ಷಣ ಸೇವೆಗೈಯುತಲಿ | ನಿತ್ಯ
ಜನರಿಗೆ ಭವಿಷ್ಯವ ಪೇಳುತ್ತ | ಸತ್ಯ ಕಥಾಮೃತ ಸುರಿಸುತಲಿ | ಭೃತ್ಯರಿಗುಣಿಸುತ್ತ
ಅವರ ಮನ ತಣಿಸುತ್ತ | ನಿತ್ಯನೂತನ ಮಹಿಮೆ ತೋರುತಲಿ | ಹತ್ತಿ ಕುದುರೆಯ
ಬಂದು ‘ಅಲೆನಾಹಿ’ ಎಂದು ಕತ್ತುರಿ ಚಲುವನ ಅಣತಿಯಂತೆ | ತೆತ್ತಿಗರೊಡನೆ
ಪಂಢರ ಪುರವ ಕಂಡು ಯಜಿಸಿ | ಉತ್ತರ ದೇಶದ ಯಾತ್ರೆಯ ಸಮಯದೀ
ಸೋತ್ತಮ ಗುರುಗಳ ಕಂಡು ನಮಿಸಿ | ಸೋತ್ತಮ ಭೃಗುಮುನಿ ವಿಜಯದಾಸರ
ಒಲಿಸಿ | ತುತಿಸಿ ಉಪದೇಶಾಂತರವ ಗ್ರಹಿಸಿ | ಸತ್ಯ ಗೋಪಾಲವಿಠಲ
ದಾಸರಾದರು | ಸತ್ಯಾಭಿನವ ಪ್ರಾಣೇಶವಿಠಲನ ದಯದಿ ||
||ತ್ರಿವಿಡಿತಾಳ||
ಪುರಂದರದಾಸರು ಇರುಳು ಸ್ವಪ್ನದಿ ಬಂದು | ಕರೆದೊಯಿದು ಇವರನ್ನು ಹರಿಕಾಶಿಗೆ
ಗುರು ವೇದವ್ಯಾಸರ ಸಮ್ಮುಖದಿವರಿಗೆ | ಹರಿದಾಸ ದೀಕ್ಷೆಯನಿತ್ತು ಹರಸಿ |
ಪರಮ ಹರುಷದಿಂದ ವಿಜಯಾಂಕಿತವಿತ್ತು | ಮರಳಿ ಕಳುಹಿದರು ಪುರ ಕಾಶಿಗೆ |
ತ್ವರಿತ ಜಾಗೃತರಾಗಿ ಕನಸಿನ ಪರಿ ನೆನೆದು ಹರುಷಾತಿಶಯದಿಂದ
ರೋಮಾಂಚಿತರಾಗಿ | ಗುರುಗಳ ಸ್ಮರಿಸುತ ತುತಿಸಿ ನಮಿಸಿ | ಹರಿ
ವಿಶ್ವನಾಥನಿಗೆರಗಿ ಸ್ತೋತ್ರಗಳಿಂದ | ಹರನ ಭಜಿಸಿ ಸೇವಿಸಿ ನಯದಿ | ಸರಸ ಕವನ
ಪದ ಸುಳಾದಿ ಪದ್ಯಂಗಳ | ಪರಮೇಯ ತಾತ್ವಿಕ ಗೂಢಾರ್ಥಗರ್ಭಿತ| ಪರಮ
ವಿಸ್ಮಯಕಾರ ಕವನಂಗಳ | ವಿರಚಿಸಿ ಶರ ಪಂಚ ಸಹಸ್ರ ಸುಳಾದಿ | ಭರತ
ವರ್ಷದಲೆಲ್ಲಾ ಚರಿಸುತ ಸಂತತ | ಹರಿಯೇ ಸರ್ವೋತ್ತಮಾ ವಾಯು
ಜೀವೋತ್ತಮಾನೆಂಬೋ | ಪರಮೋಚ್ಛ ಸಿದ್ಧಾಂತ ಬೀರುತಲಿ | ಹರಿ ಕೀರ್ತನೆ ಗೈದು
ಧರ್ಮ ಭಾಗವತ | ಭರತ ಖಂಡದಲ್ಲೆಲ್ಲಾ ಬೀರುತಲಿ | ಧರಿಸುರ ನತರಿಗೆ ಸಾರಿದ
ರಹಸ್ಯವ | ಅರುಹುತ ಹರಿದಾಸ್ಯ ದೀಕ್ಷೆ ನೀಡಿ | ಶರಣರುದ್ಧರಿಸಿದ ಕರುಣ
ಮಹಾರ್ಣವ | ಹರಿದಾಸವರ್ಯನೆ ಶರಣು ಶರಣು | ಶರಣ ಜನ ಸುರಧೇನು
ದುರುಳ ಜನ ತಿಮಿರಭಾನು | ಕರುಣಾಳು ಅಭಿನವ ಪ್ರಾಣೇಶ ವಿಠಲನ |
ಚರಣಾನುಗ್ರಹ ಪಡೆದ ಹರಿದಾಸವರ್ಯ ||
||ರೂಪಕತಾಳ||
ಪವನ ಮತವನುಸರಿಸಿ ನವವನವನುಧರಿಸಿ | ಶ್ರವಣ ಮನನ ಧ್ಯಾನವನು
ಅಂಗೀಕರಿಸಿ | ಅವನಿಯೊಳಗೆ ಹೀನ ದೈವವ ನಿರಾಕರಿಸಿ | ಜವನ ದೂತರಿಗೆ
ಭಯವನೆಲ್ಲ ತೋರಿಸಿ | ಭವ ರೋಗಗಳು ಪರಾಭವ ಮಾಡಿಸಿ ದೂರಿರಿಸಿ |
ಕವಿಗಳ ಮನದ ತಾಪವನು ಪರಿಹರಿಸಿ | ಕವನಕ್ಕೆ ಸರಿಯಿಲ್ಲೆಂದವನಿಯೊಳಗೆ
ಮೆರಸಿ | ಕವಿತಾ ಜನರ ಪ್ರೀಯ ವಿಜಯ ವಿಠ್ಠಲರೇಯ | ದಿವಿಜಾದ್ಯರೊಳು
ದೈವವೆಂದು ಪತಿಕರಿಸಿ | ಸವಿನುಡಿಯಿಂದ ನಮ್ಮನ್ನೆಲ್ಲ ಉದ್ಧರಿಸಿ ||
||ಝಂಪೆತಾಳ||
ಪಂಚದ್ವಾರಗಳಿಂದ ಪಂಚವಪುಷಗಳಿಂದ | ಪಂಚರೂಪದ ಧ್ಯಾನ ಮಾಳ್ಪ ನಿನ್ನ |
ಪಂಚಮುಖ ಮೊದಲಾದಮರರೆಲ್ಲರು ನಿ |ಶ್ಚಂಚಲದಿ ಭಜಿಸುತಿರೆ ಅವರವರ |
ವಾಂಛಿತಗಳ ನಿತ್ತು ಪೊರೆವ ಮುಖ್ಯಪ್ರಾಣ ದ್ವಿ | ಪಂಚಕರಣಕೆ ಮುಖ್ಯ ಮಾನಿ ನೀನೆ
ಪಂಚರೂಪಗಳಿಂದ ಪಂಚಗ್ನಿಗತನಾಗಿ | ಪಂಚವ್ಯಾಪರಗಳ ಮಾಳ್ಪದೇವ | ಪಂಚ
ಪರ್ವದಲ್ಲಿಪ್ಪ ಪಂಚ ಪಂಚಮರರು | ಸಂಚರಿಸುವರಯ್ಯಾ ನಿನ್ನಿಂದಲಿ | ಪಂಚ
ಭೇದಗಳರಹಿ ಶುದ್ಧ ಶಾಸ್ತ್ರಗಳಿಂದ ಪ್ರ | ಪಂಚ ಸಲಹಿದ ವಿಮಲ ಉಪಕಾರಿಯ
ನಿ | ಷ್ಕಿಂಚನರ ಪ್ರೀಯ ಗುರುವಿಜಯ ವಿಠ್ಠಲರೇಯನ | ಮಿಂಚಿನಂದದಿ ಎನ್ನ
ಮನದಿ ನಿಲಿಸು ||
||ತ್ರಿವಿಡಿತಾಳ||
ಪಾಲಸಾಗರಶಾಯಿ ಮೂಲೋಕದೊಡಯನೆ | ವ್ಯಾಲಮರ್ದನಗೋಪಾಲಬಾಲಾ |
ಲೋಲಲೋಚನಿಯರ ಮೇಳವಬಯಸುತ್ತ | ಕೀಳುಮಾನವನಂತೆ ಬಾಳಿದೆನೋ
ದೇವ ತಾಳಂಕಾನುಜ ನಿನ್ನ ಬಾಲಕನುಪಟಳ | ಭಾಳವಾಗಿದೆ ಸ್ವಾಮಿ ತಾಳಲಾರೆ |
ಏಳಲಮಾಡದೆ ಪಾಲಿಸು ಕರುಣದಿ | ಕಾಳಿರಮಣ ಹೃದಯಾಲಯನೆ |
ಕಾಲಭಿನವಪ್ರಾಣೇಶವಿಠಲ ನಿನ್ನ | ಊಳಿಗವನು ನೀಡು ಮೇಲುಕರುಣದಿ
ನೋಡು ||
||ಜತೆ||
ಪ್ರಾಣಗತಿ ಬಂದರು ಮಧ್ವಮತ ಬಿಡದಿರಿ |
ಪ್ರಾಣಧೃತನಾಮ ನಮ್ಮ ವಿಜಯ ವಿಠ್ಠಲಗರ್ಪಿಸೋ ||