ಸುಳಾದಿ (ತ)
||ಅಟ್ಟತಾಳ||
ತಪ ಮಾಡಿ ಇಕ್ಷ್ವಾಕು ಬ್ರಹ್ಮನ ಮೆಚ್ಚಿಸಿ | ಕೃಪೆಯಲ್ಲಿ ಮೂಲರಾಮನ ಕೊಡಲಿತ್ತಲು
ಕ್ಷಿತಿಯೊಳಗೆ ಅಯೋಧ್ಯದಲ್ಲಿ ಪೂಜಿಸಲಾಗಿ | ಅತಿಶಯವಾಗಿ ರಾಮಚಂದ್ರ
ಪರಿಯಂತ | ಮಿತಿ ಇಲ್ಲದ ವೋಲಗದಲ್ಲಿ ಒಪ್ಪಲು | ಕ್ಷಿತಿಸುತೆ ತಾನೆ ಪೂಜಿಸಿ
ಹನುಮಂತಗೆ | ಪ್ರತಿಮೆಯ ಪಾಲಿಸೆ ಅಲ್ಲಿಂದ ಮಾರುತ | ಸುತನು
ಜಾಂಬುವಂತಗೆ ದಯ ಮಾಡಿದ | ಸತತ ಮಂಗಳ ಕಾಯಾ ವಿಜಯವಿಠಲ
ರಾಮಾ | ನುತಿಸಿಕೊಳುತಲಿದ್ದ ಸುರರಾದಿಗಳ ಕೈಯಾ ||
||ಮಟ್ಟತಾಳ||
ತರುಳತನದಲ್ಲಿ ಘೋರರೋಗದಿಂದ | ಧರೆಯಾಸೆಯ ನಾನು ತೊರೆದಿರಲು ನಿನ್ನ |
ಚರಣಕಿಂಕರರಾದ ವರದೇಶದಾಸರು | ಹರಿದಾಸನು ಇವನು ಕರುಣವ
ತೋರೆಂದು | ಹರಿ ನಿನ್ನಡಿಯಲ್ಲಿ ಮೊರೆಯಿಡಲಾಕ್ಷಣದಿ | ವರಭಕ್ತರ ನುಡಿಯ
ಲಾಲಸಿಯೆನ್ನನು | ಕರೆದು ತಂದಿದೇವ ನಿರಯನಗರದಿಂದ |
ಕರುಣಾರ್ಣವಭಿನವಪ್ರಾಣೇಶವಿಠಲನೆ | ಮರೆದು ನಿನ್ನಯ ನಾಮ
ನರಕಭಾಜನನಾದೆ ||
||ಮಟ್ಟತಾಳ||
ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ | ಮರುತಾಗಮ ಗಳಿಸಿ ತುರುರಕ್ಷಕ
ದಾಸ | ವರಿಯರ ಕರುಣದಲಿ ಶರಧಿಜ ಭಾಗದಲಿ | ಧರಣಿಪ ವಿಠಲೆಂಬೊ
ಸುರುಚಿರದಂಕಿತವ | ದೊರಕಿಸಿ ಪ್ರಾಕೃತದಿ ಕರುಣಾಕರ ಶ್ಯಾಮ ಸುಂದರ
ನೊರ್ಣಿಸಿದಾ ಪರಮ ಭಾಗವ | ತರ ನೆರೆ ನಂಬೊ ನಿರುತಾ ||
||ತ್ರಿವಿಡಿತಾಳ||
ತಾಮಸ ಗುಣವುಳ್ಳ ಪಾಮರ ಜನರಿಗೆ | ಈ ಮಹಿಮೆ ದೊರಕುವುದೇ ಸ್ವಾಮಿ
ಸಿಲುಕುವನೆ ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ | ಧಾಮ
ದೊರಿಯದು ಭೂಮಿಯೊಳಗಿದ್ದ | ಭ್ರಾಮಕ ಜನರಿಗೆ ವಾಮದೇವನೆ
ಹಿರಿಯನೆಂದು ಬುದ್ಧಿಯ ಕೊಡುವ | ಕಾಮಾರಿ ವಂದ್ಯ ನಮ್ಮ ವಿಜಯ ವಿಠಲನು |
ಸಾಮಾನ್ಯ ಜನರಿಗೆ ದೊರಕುವನೇ ಕೇಳಿ ||