ಅಮೃತ ಪಾನಕ

ಬೇಕಾಗುವ ಸಾಮಗ್ರಿಗಳು
- ಕಳತಾದ ಹುಣಸೇ ಹಣ್ಣು ಒಂದು ನಿಂಬೇ ಗಾತ್ರ
- ಕರಿ ಮೆಣಸಿನ ಪುಡಿ ಚಿಟಿಕೆ
- ಬೆಲ್ಲ (ಸಿಹಿಗೆ) ನಾಲ್ಕು ಚಮಚ
- ಉಪ್ಪು ಚಿಟಿಕೆ
ಮಾಡುವ ವಿಧಾನ
- ಹುಣಸೇಹಣ್ಣನ್ನು ಐದು ನಿಮಿಷ ನೀರಿನಲ್ಲಿಟ್ಟು ಅನಂತರ ಕಿವುಚಿ ಚರಟ ಎಸೆಯಿರಿ.
- ಎರಡು ಮೂರು ಲೋಟ ಪ್ರಮಾಣದಷ್ಟು ನೀರಿಗೆ ಹುಳಿ ಸೇರಿಸಿ
- ಬೆಲ್ಲ,ಉಪ್ಪು ಸೇರಿಸಿ ಕದಡಿರಿ.
**ಶೀತ ಪ್ರಕೃತಿಯ ಖಾರ ಪ್ರಿಯರಿಗೆ ತುಸು ಕರಿಮೆಣಸಿನ ಪುಡಿ ಬೆರೆಸಿ ಕೊಡಿ.
**ಪಿತ್ತಹರವಾದ ಈ ಪಾನಕ,ಪಿತ್ತದ ವಾತಿಗೂ ಉಪಶಮನ ಕೊಡುತ್ತದೆ.