ದಾಸರಪದ (ತ)
ತನು ನಿನ್ನದು ಜೀವನ
ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಲಿ ಬಾಹೋ ಸುಖ ದುಃಖ ನಿನದಯ್ಯ ಪ
ಸವಿನುಡಿ ವೇದ ಪುರಾಣ ಶಸ್ತ್ರುಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವ ಮೋಹನಗಿಯರ ರೂಪವ ಕಣ್ಣಿಂದ
ಎವೆಯಿಕ್ಕದಲೆ ನೋಡುವ ನೋಟ ನಿನ್ನದಯ್ಯ ೧
ಒಡಗೂಡಿ ಗಂಧ ಕಸ್ತೂರಿ ಪರಿಮಳಗಳ
ಬಿಡದೆ ಲೇಪಿಸಿಕೊಂಬುದು ನಿನ್ನದು
ಷಡುರಸದನ್ನಕೆ ನಲಿದಾಡುವ ಜಿಹ್ವೆ
ಕಡುರುಚಿಗೊಂಡರಾರುಚಿ ನಿನದಯ್ಯ ೨
ಮಾಯಪಾಶದ ಬಲೆಯೊಳಗೆ ಸಿಲ್ಕಿರುವಂತ
ಕಾಯ ಪಂಚೇಂದ್ರಿಯಗಳು ನಿನ್ನವು
ನ್ಯಾಯದಿ ಕನಕ ನೊಡೆಯ ಆದಿಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೆ ೩
ಮೂರುತಿಯನು ನಿಲ್ಲಿಸೋ, ಮಾಧವ ನಿನ್ನ
ಎಳೆತುಳಸಿಯ ವನಮಾಲೆಯ ಕೊರಳೊಳು
ಪೊಳೆವ ಪೀತಾಂಬರದಿಂದಲೊಪ್ಪುವ ನಿನ್ನ
ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀಲಕ್ಷ್ಮಿಯು ಉರದೊಳೊಪ್ಪುವ ನಿನ್ನ
ಭಕ್ತಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ಪುರಂದರವಿಠಲ ನಿನ್ನ
ತನುವ ನೀರೋಳಗದ್ದಿ ಫ಼ಲವೇನು,
ತನುವ ನೀರೋಳಗದ್ದಿ ಫ಼ಲವೇನು, ತನ್ನ ಪ
ಮನದಲ್ಲಿ ದೃಡ ಭಕ್ತಿಯಿಲ್ಲದ ಮನುಜನ ಅ.ಪ
ದಾನ ಧರ್ಮಗಳನ್ನು ಮಾಡುವುದೇ ಸ್ನಾನ
ಜ್ಞಾನತ್ತತ್ವಂಗಳ ತಿಳಿವುದೆ ಸ್ನಾನ
ಹೀನ ಪಾಶಂಗಳ ಹರಿವುದೇ ಸ್ನಾನ
ಧ್ಯಾನದಿ ಮಾಧವನ ನೋಡುವುದೇ ಸ್ನಾನ ೧
ಗುರುಗಳ ಶ್ರೀಪಾದತೀರ್ಥವೆ ಸ್ನಾನ
ಹಿರಿಯರ ದರ್ಶನ ಮಾಡುವುದೇ ಸ್ನಾನ
ಕರೆದ ಅತಿಥಿಗೆ ಅನ್ನ ಇಡುವುದೇ ಸ್ನಾನ
ನರಹರಿ ಚರಣವ ನಂಬುವುದೇ ಸ್ನಾನ ೨
ದುಷ್ಟರ ಸಂಗವ ಬಿಡುವುದೇ ಸ್ನಾನ
ಶಿಷ್ಟರ ಸಹವಾಸ ಮಾಡುವುದೇ ಸ್ನಾನ
ಸೃಷ್ಟಿಯೊಳಗೆ ಸಿರಿಪುರಂದರ ವಿಠಲನ
ಮುಟ್ಟಿ ಭಜಿಸಿ ಪುಣ್ಯ ಪಡೆವುದೆ ಸ್ನಾನ ೩
ತಪ್ಪುಗಳೆಣೆಸದೆನ್ನಪ್ಪ ಕಾಯಲಿಬೇಕು
ಸರ್ವಶಯನನ ದೂತ
ಇಪ್ಪತ್ತು ಒಂದು ಕುಭಾಷ್ಯ ಮುರಿದರೆ ಮ-
ತ ಪ್ರವರ್ತಕ ರಾಘವೇಂದ್ರ ಮುನಿಪ ಮಹಾ
ಪ್ರತಿ ವರುಷಕೆ ಬಂದು ನುತಿಸಿ ಪೋಗು ಎಂದು
ನತ ಸ್ವಪ್ನದಲಿ ಬಂದು ನೀ ಬಂದು
ಹಿತದಿಂದ ಪೇಳಲು ರತನಾಗಿ ಧನದಿ ಮ-
ರೆತುಬಿಟ್ಟೆ ನಿಮ್ಮನು ಯತಿ ಕುಲೋತ್ತಮ ಇಂಥ
ಸ್ನಾನ ಸಂಧ್ಯಾನ ಸುಜಪ ತಪ ವ್ರತ ಹೋಮ
ಮೌನಮಾರ್ಗಗಳರಿಯೆ
ಜ್ಞಾನಿಗಳಾನು ಸಂಧಾನ ಪೂರ್ವಕ ಪೂಜೆ
ಯಾನುಮಾಡದೆ ದುಷ್ಟ ಮಾನವರೊಳಗಿದ್ದ
ಏಸು ಜನ್ಮದಿ ಬಂದ ದೋಷವ ಕಳೆದು ವಿ-
ಶೇಷ ಸುಖವ ಕೊಡುವ
ಈ ಸುವಾರ್ತೆಯ ಕೇಳಿ ಮೊರೆಹೊಕ್ಕೆ ಗುರುಪ್ರಾ-
ಣೇಶ ವಿಠಲನ ದೂತ ಮತ್ಪ್ರೀತ
ತಲ್ಲಣಿಸಿದಿರು ಕಂಡ್ಯ ತಾಳು
ತಲ್ಲಣಿಸಿದಿರು ಕಂಡ್ಯ ತಾಳು ಮನವೆ ಸ್ವಾಮಿ
ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ
ಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ
ಕಟ್ಟೆ ಕಟ್ಟುತ ನೀರ ಹೊಯ್ವರಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರ ನಾದ ಮ್ಯಾಲೆ
ಕೊಟ್ಟು ರಕ್ಷಿಸುವನು ಇದಕೆ ಸಂದೇಹ ಬೇಡ ೧
ಅಡವಿಯೊಳಗಾಡುವ ಮೃಗ ಜಾತಿ ಪಕ್ಷಿಗಳಿಗೆ
ಅಡಿಗಡಗೆ ಆಹಾರವಿತವರದಾರು
ಪಡೆದ ಜನನಿಯಂತೆ ಸಾರಥಿಯಾಗಿ ತಾ
ಬಿಡದೆ ರಕ್ಷಿಸುವನು ಇದಕೆ ಸಂದೇಹ ಬೇಡ ೨
ಕಲ್ಲೊಳಗೆ ಪುಟ್ಟಿ ಕೂಗುವ ಮಂಡೂಕಂಗಳಿಗೆ
ಅಲ್ಲಿ ಹೋಗಿ ಆಹಾರವಿತ್ತವರದಾರು
ಬಿಲ್ಲಿದನು ಕಾಗಿನೆಲೆಯಾದಿ ಕೇಶವರಾಯ
ನಿಲ್ಲದೇ ರಕ್ಷಿಪನು ಇದಕೆ ಸಂದೇಹ ಬೇಡ ೩
ತಾರಕ್ಕ ಬಿಂದಿಗೆ ನೀರಿಗೆ
ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ ತಾರೇ ಬಿಂದಿಗೆಯ
ಬಿಂದಿಗೆ ಒಡದರೆ ಒಂದೇ ಕಾಸು ತಾರೇ ಬಿಂದಿಗೆಯ ಪ
ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ
ಕಾಮಿನಿಯರ ಕೂಡೆ ಏಕಾಂತ ವಾಡೇನು ತಾರೇ ಬಿಂದಿಗೆಯ ೧
ಗೋವಿಂದಯೆಂಬುವ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ
ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ ೨
ಬಿಂದುಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ
ಪುರಂದರವಿಠಲಗೆ ಅಭಿಷೇಕ ಮಾಡುವೆ ತಾರೇ ಬಿಂದಿಗೆಯ ೩
ತಾಳುವಿಕೆಗಿಂತ ತಪವು ಇಲ್ಲ
ತಾಳುವಿಕೆಗಿಂತ ತಪವು ಇಲ್ಲ ಪ
ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ಅ.ಪ
ದುಷ್ಟ ಮನುಜನರು ಪೇಳೆ ನಿಷ್ಠರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೇ ತಾಳು
ನೆಟ್ಟಸಸಿ ಫಲಬರುವತನಕ ಶಾಂತಿಯ ತಾಳು
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು ೧
ಹಳಿದು ಹಂಗಿಸುವ ಹಗೆಯ ಮಾತನು ತಾಳು
ಸುಳಿನುಡಿ ಕುಹಕ ಕುಮಂತ್ರವನು ತಾಳು
ಅಲುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನ್ನು ಹೃದಯದಲಿ ತಾಳು ೨
ನಕ್ಕುನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು
ಉಕ್ಕೋಹಾಲಿಗೆ ನೀರು ಇಕ್ಕಿದಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು ೩
ತಂಗಿ ನೀ ಕೇಳಿದ್ಯಾ
ತಂಗಿ ನೀ ಕೇಳಿದ್ಯಾ ಅಂಗನಾಮಣಿ
ರಂಗವೊಲಿದ ಭಾಗವತರ ಮಹಿಮೆಗಳ ಪ
ಶ್ರವಣಾದಿ ನವವಿಧ ಸವಿಯ ಭಕುತಿಯಿಂದ
ಪ್ರವೀಣರೆನಿಸಿ ಶ್ರೀ ಮಾಧವನ ಧೆನಿಪ ಖ್ಯಾತಿ ೧
ಅಮಲ ಸತ್ಕರ್ಮದಿ ಶಮದಮಪೂರ್ವಕ
ಅಮಿತ ಮಹಿಮನಂಘ್ರಿಕಮಲಾರ್ಚಿಪ್ರಖ್ಯಾತಿ ೨
ಶ್ರೀದವಿಠಲನ ಪಾದ ಭಜಕರಾದ
ಸಾಧುವರ್ಯರ ಸುಭೋಧ ಬಣ್ಣಿಪರಾರೆ ೩
ತುಂಗಾತೀರದಿ ನಿಂತ
ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ ಪ
ಸಂಗೀತ ಪ್ರಿಯ ಮಂಗಳ ಸುಗುಣತರಂಗ ಮುನಿಕುಲೋತ್ತುಂಗ ಕಾಣಮ್ಮ
ಚೆಲುವ ಸುಮುಖ ಫಣಿಯಲಿ ತಿಲಕ ನಾಮಗಳ ನೋಡಮ್ಮ
ಜಲಮಣಿಯು ಕೊರಳಲ್ಲಿ ತುಳಸಿ ಮಾಲೆಗಳು ಪೇಳಮ್ಮ
ಸುಲಲಿತ ಕಮಂಡಲ ದಂಡವನ್ನೇ ಧರಿಸಿಹನೇ ನೋಡಮ್ಮ
ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ ೧
ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ
ವಂದಿಸಿ ಸ್ತುತಿಸುವ ಭೂಸುರರವೃಂದ ನೋಡಮ್ಮ
ಚಂದದಲಂಕೃತಿಯಿಂದ ಶೋಭಿಸುವಾನಂದ ನೋಡಮ್ಮ
ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಫದಿಂದ ರಹಿತನೆ ೨
ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ
ಅಭಿವಂದಿಸಿ ದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ
ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ
ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ
ಪ್ರಬಲಕಾಣಮ್ಮ ೩
ತುಂಗೆ ಮಂಗಳ ತರಂಗೆ
ತುಂಗೆ ಮಂಗಳ ತರಂಗೆ ಪ
ಹರಿಸರ್ವಾಂಗೆ ಜಯ ಜಯತು ಜಯ ಜಯ ತುಂಗಭದ್ರೆ ಅ.ಪ
ಆದಿಯಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು
ಸಾಧಿಸುತ್ತಿರಲವನ ಬೆನ್ನಟ್ಟಿ ಬಿಡದೆ
ಛೇದಿಸುತಲವನ ಭೂಮಿಯನೆತ್ತಿ ಕಾಯ್ದೆಂಥ
ಆದಿವರಾಹನ ದಾಡೆಗಳಿಂದ ಬಂದೆ ೧
ಜಲವೆಲ್ಲ ಹರಿಮಯ ಶಿಲೆಯೆಲ್ಲ ಶಿವಮಯ
ಮಳಲು ಮಿಟ್ಟಿಗಳೆಲ್ಲ ಮಣಿಯ ಮಯವು
ಬೆಳೆದಿಪ್ಪ ಧರ್ಬೆಗಳು ಸಾಕ್ಷಾತ್ತು ಬ್ರಹ್ಮಮಯ
ನಳಿನನಾಳವು ಸರ್ವವಿಷ್ಣುಮಯವು ೨
ತೂಗಿರೆ ರಾಯರ ತೂಗಿರೆ ಗುರುವರರ
ತೂಗಿರೆ ರಾಯರ ತೂಗಿರೆ ಗುರುವರರ
ತೂಗಿರೆ ಯತಿಕುಲ ತಿಲಕರ ಪ
ತೂಗಿರೆ ಯೋಗೇಂದ್ರ ಕರಕಮಲ ಪೂಜ್ಯರ
ತೂಗಿರೆ ಗುರುರಾಘವೇಂದ್ರರ ಅ.ಪ
ಕುಂದಣಮಾಯವಾದ ಚೆಂದ ತೊಟಿಲದೊಳು
ನಂದದಿ ಮಲಗ್ಯಾರು ತೂಗಿರೆ
ನಂದನಂದನ ಗೋವಿಂದ ಮುಕುಂದನ
ನಂದದಿ ಭಜಿಪರ ತೂಗಿರೆ ೧
ಯೋಗನಿದ್ರೆಯನ್ನೆ ಬೇಗನೆ ಮಾಡುವ
ಯೋಗೀಶವಂದ್ಯರ ತೂಗಿರೆ
ಭೋಗೀಶಯನನ ಪಾದ ಯೋಗದಿ ಭಜಿಪರೆ
ಭಾಗವತರನ್ನ ತೂಗಿರೆ ೨
ನೇಮದಿ ತನ್ನನ್ನು ಕಾಮಿಪಜನರಿಗೆ
ಕಾಮಿತ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಯವನುಕೂಲ
ಧೂಮಕೇತುವೆನಿಪರ ತೂಗಿರೆ ೩
ಅದ್ವೈತ ಮತದ ವಿದ್ವಂಸನ ನಿಜಗುರು
ಮದ್ವಮತೋದ್ದರರ ತೂಗಿರೆ
ಸಿದ್ದ ಸಂಕಲ್ಪ ದಿ ಬದ್ದ ನಿಜಭಕ್ತರ
ಉದ್ದಾರ ಮಾಳ್ಪರ ತೂಗಿರೆ ೪
ಭಜಕಜನರ ಭವ ತ್ಯಜನ ಮಾಡಿಸಿ ಅವರ
ನಿಜಗತಿಯಿಪ್ಪರ ತೂಗಿರೆ
ನಿಜಗುರು ಜಗನಾಥವಿಠಲನ ಪದಕಂಜ
ಭಜನೆಯ ಮಾಳ್ಪರ ತೂಗಿರೆ ೫
ಇದೆ ವೃಂದಾವನ ಇದೆ ಕ್ಷೀರಾಂಬುದಿ
ಇದೆ ವೈ ಕುಂಟ ಕೆ ಸರಿಯೆಂದನಿಸಿದೆ
ಇದೆ ಬದರಿಕಾಶ್ರಮ ಇದೆ ವಾರಣಾಸಿಗೆ
ಅಧಿಕ ಫಲವನ್ನೀವ ದೇವಿ ೩
ಧರೆಗೆ ದಕ್ಷಿಣ ವಾರಣಾಸಿ ಎಂದೆನಿಸಿದೆ
ಪರಮಪವಿತ್ರೆ ಪಾವನಚರಿತೆ ನಿನ್ನ
ಸ್ಮರಣೆ ಮಾತ್ರದಿ ಕೊಟಿಜನ್ಮದಘವನು ಕಳೆವ
ಸರಿದು ಸಾಯುಜ್ಯ ಫಲವೀವ ದೇವಿ ೪
ಪರಮ ಭಕ್ತ ಪ್ರಹ್ಲಾದಗೊಲಿದು ಬಂದು
ನರಸಿಂಹ ಕ್ಷೇತ್ರವೆಂದೆನಿಸಿ ಮೆರೆದೆ
ಧರೆಯೋಳಧಿಕ ವರ ಕೊಡಲಿಪುರದಲ್ಲಿ
ವರದ ಪುರಂದರವಿಠಲನಿರಲು ಬಂದೆ ೫
ತೇಲಿಸೋ ಇಲ್ಲ ಮುಳಗಿಸೋ
ತೇಲಿಸೋ ಇಲ್ಲ ಮುಳಗಿಸೋ ನಿನ್ನ
ಕಾಲಿಗೆ ಬಿದ್ದನೋ ಪರಮ ಕೃಪಾಳೋ ಪ
ಸತಿಸುತ ಧನದಾಸೆ ಎಂಬಂತೆ ಮೋಹದಿ
ಹಿತದಿಂದ ಅತಿನೊಂದು ಬೆಂಡಾದೆನೊ
ಗತಿಕೊಡುವರ ಕಾಣೆ ಮತಿಯ ಪಾಲಿಸೋ ಲಕ್ಷ್ಮೀ
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ೧
ಜರೆರೋಗ ದಾರಿದ್ಯ ಕಶ್ಮಲ ವೆಂತೆಂಬ
ಶರಧಿಯೊಳಗೆ ಬಿದ್ದು ಮುಲುಗಿದೆನೊ
ಸ್ಥಿರವಲ್ಲ ದೇಹವು ನರೆನಂಬಿದೆ ನಿನ್ನ
ಕರುಣಾ ಭಯವಿತ್ತು ಪಾಲಿಸೋ ಹರಿಯೇ ೨
ದೋಷವುಳ್ಳವ ನಾನು , ಭಾಷೆಯುಳ್ಳವ ನೀನು
ಮೋಸ ಹೋದೆನೋ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರ ವಿಠಲನ
ದಾಸರ ಸಂಗವಿತ್ತು ಪಾಲಿಸೋ ಹರಿಯೇ ೩
ತೊರೆದು ಜೀವಿಸ ಬಹುದೆ
ತೊರೆದು ಜೀವಿಸ ಬಹುದೆ ಹರಿ ನಿನ್ನ ಚರಣಗಳ
ಮರೆಯ ಮಾತೆಕಿನ್ನು ಅರಿತು ಪೇಳುವೆನು ಪ
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು
ಕಾಯಜನಪಿತ ನಿನ್ನ ಅಡಿಯ ಬಿಡಲಾಗದು ೧
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಗೆ ಗಳಿಗೆ ಬಿಡಲಾಗದು ೨
ಪ್ರಾಣವನ್ನು ಪರರ ಬೇಡಿದರೆತಿಕೊದ ಕೊಡಬಹುದು
ಮಾನದಲಿ ಮನವ ತಗ್ಗಿಸಲುಬಹುದು
ಪ್ರಾಣನಾಯಕನಾದ ಆದಿಕೇಶವ ರಾಯ
ಜಾಣ ಶ್ರೀಕೃಷ್ಣ ಇನ್ನಡಿಯ ಬಿಡಲಾಗದೋ ೩
ತೋಳು ತೋಳು ತೋಳು ರಂಗ
ತೋಳು ತೋಳು ತೋಳು ರಂಗ ತೋಳನ್ನಾಡೈ ||ಪ||
ನೀಲವರ್ಣದ ಬಾಲಕೃಷ್ಣನೇ ತೋಳನ್ನಾಡೈ ||ಅ ಪ||
ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ
ಅರ್ಜುನ ರಥಕೆ ಸಾರಥ್ಯ ಮಾಡಿದ ತೋಳನ್ನಾಡೈ
ಲಜ್ಜೆಗೀಡಾದ ದ್ರೌಪದಿಕಾಯ್ದ ತೋಳನ್ನಾಡೈ
ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||೧||
ನಖದಿಂದ ಹಿರಣ್ಯಕನುದರವ ಬಗೆದ ತೋಳನ್ನಾಡೈ
ಸುಖದಿಂದಲಿ ಪ್ರಹ್ಲಾದನಕಾಯ್ದ ತೋಳನ್ನಾಡೈ
ವಿಗಣಿತಗೊಳಿಸಿದ ಗೋಪಸ್ತ್ರೀಯರ ತೋಳನ್ನಾಡೈ
ಸುಖತೀರ್ಥರಪತಿ ಪುರಂದರವಿಠ್ಠಲ ತೋಳನ್ನಾಡೈ ||2 ||
ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ? (ಪಾರ್ವತಿ ವಿಷ್ಣುವಿಗೆ ಹೇಳಿದ್ದು )
ಕರಿಯ ಜಟೆಯ ಜೋಗಿಗಿ೦ತ ಊತ್ತಮನಲ್ಲವೇನೇ ? (ಲಕ್ಷ್ಮಿ ಹರನಿಹೆ ಹೇಳಿದ್ದು )
ಜಲಧಿಯೊಳು ವಾಸವೇನೆ ಮನೆಗಳು ಇಲ್ಲವೆ ? (ಮತ್ಸ್ಯ )
ಲಲನೆ ಕೇಳು ಕಾಡಿಗಿ೦ತ ಲೇಸು ಅಲ್ಲವೇ ?
ಮಂದರ ಗಿರಿಯ ಪೂತ್ತಿಹುದು ಎನು ಚಂದವೇ ? (ಕೊರ್ಮ)
ಕಂದನ ಒಯ್ದು ಅಡವಿಯಲ್ಲಿಡುವುದು ಯಾವ ನ್ಯಾಯವೇ ?
ಮಣ್ಣನು ಅಗೆದು ಬೇರನೌ ಮೆಲುವುದು ಏನು ಸ್ವಾದವೇ ? (ವರಹ)
ತನ್ನ ಕೈಯಲ್ಲಿ ಕಪಾಲ ಪಿಡಿವುದು ಯಾವ ನ್ಯಾಯವೇ ?
ಮುತ್ತಿನ ಹಾರ ಇರಲು ಕರುಳ ಮಾಲೇ ಧರಿಸುವರೇ ? (ನಾರಸಿ೦ಹ)
ನಿತ್ಯ ರು೦ಡ ಮಾಲೇ ಧರಿಸೋದು ಯಾವ ನ್ಯಾಯವೇ ?
ಗಿಡ್ಡನಾಗಿ ಬೆಳದು ಅಳೆವುದು ಏನು ನ್ಯಾಯವೇ ? (ವಾಮನ )
ಗುಡ್ಡದ ಮಗಳ ತ೦ದೆಗೆ ಮುನಿಯೋಧ್ಯವ ನ್ಯಾಯಾವೇ ?
ಪಿತನ ಮಾತ ಕೇಳಿ ಮಾತೆಯ ಶಿರವಾನಳಿವಾರೇ ? (ಪರಶುರಾವ)
ಕ್ಷಿತಿ ಕ೦ಟನಾಗಿ ಇರುವುದು ಯಾವ ನ್ಯಾಯವೇ ?
ಕೊಡಗ ಕರದಿ ಕಪಿಗಳ ಹಿ೦ಡು ಬ೦ಧು ಬಳಗವೇ ? (ರಾಮ)
ಕೂಡಿ ಬ೦ದ ಭೂತ ಬಳಗ ಜ್ಞಾತಿ ಸ೦ಬ೦ಧವೇ ?
ಹಾವಿನ ಹೆಡೆಯ ತುಳಿವಾರೇನೇ ಅ೦ಜಿಕಿಲ್ಲವೇ ? (ಕೃಷ್ಣ)
ಹಾವೇ ಮೈಯಿಗೆ ಸುತ್ತಿ ಇರಲು ಹ್ಯಾ೦ಗೆ ಜೀವಿಪನೇ ?
ಬತ್ತಲು ಇರವನೇನು ಅವಗೆ ನಾಚಿಕಿಲ್ಲವೇ ? (ಬುದ್ಧ)
ಸತ್ತ ಗಜದ ಚರ್ಮ ಹೊದೆಯಾಲು ಹೇಸಿಕಿಲ್ಲ ವೇ ?
ಊತ್ತಮ ತೇಜಿ ಇರಲು ಧರೆಯೊಳು ಹದ್ದನು ಏರ್ವರೇ ? (ಕಲ್ಕಿ?
ಎತ್ತಿನ ಬೆನ್ನು ಏರಿದವರು ಬುದ್ಧಿವ೦ತರೇ ?
ಹರಿ ಹರರಿಗೆ ಸಾಮ್ಯವೇನೆ ಹೇಳೇ ರುಕ್ಮಿಣೀ ?
ಪುರ೦ದರ ವಿಠಲ ಸರ್ವೋತ್ತಮ ಕೇಳೆ ಭಮಾನಿ