ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕವಿಯಾಗುವಾಸೆ

picture

ಕವಿಯಾಗುವಾಸೆ ಅನುಭವಿಯಾಗುವಾಸೆ
ಜಗದ ಜೋಲಿಯ ತೂಗೋ ರವಿಯಾಗುವಾಸೆ

ತಾಯ ಮೊಲೆಹಾಲ ಸಂಭ್ರಮದೆ ಹೀರುವ
ಕಂದನ ಕಂಗಳ ಕಾಂತಿಯ ಪ್ರತಿಫಲಿಸುವಾಸೆ

ತನುಮನಗಳಾಲಿಂಗನದೋಳ್ ಜಗವ ಮರೆವ
ಪ್ರಣಯಿಗಳ ಪ್ರೇಮದಾಳವ ಅಳೆಯುವಾಸೆ

ಪ್ರಕೃತಿಯೇ ಪ್ರಾದುರ್ಭವಿಸಿದಂದದಿ ಪ್ರೇಮದ ಕಂಪ ಸೂಸುವ
ಕುಸುಮಗಳ ರಸಗಂಧವ ಹೀರಿ ಉನ್ಮತ್ತ ದುಂಬಿಯಾಗುವಾಸೆ

ಸ್ವಾತಂತ್ರ್ಯ ವೆಂಬ ರೆಕ್ಕೆಗಳ ಬಡಿಯುತ್ತಾ ಜಿಗಿ ಜಿಗಿದು ಪುಟಿಪುಟಿದು
ಬೆಳದಿಂಗಳಿನತ್ತ ಪಯಣಿಸುವ ಹಕ್ಕಿಯಾಗುವಾಸೆ

ಹೃದಯಾಂತರಾಳದಲಿ ಹುದುಗಿಹ ಸವಿನೆನಪುಗಳ ಬಗೆದಗೆದು
ಪರಿಪರಿಯ ರಂಗುಗಳ ರಂಗೋಲಿ ಮಾಡಿ ಬಿತ್ತರಿಸುವಾಸೆ

ದಿಗಂತದಲಿ ಮಿನುಗುವ ಚುಕ್ಕಿಗಳ ಜೊತೊ ಚಕ್ಕಂದವಾಡುತಾ
ಮುಗಿಲಿನಿಂದುದುರುವ ಮಳೆಹನಿಗಳ ಜೊತೆ ಸಾಗರವ ಸೇರುತ
ಅನಂತದಲಿ ಲೀನವಾಗುವಾಸೆ

ಕವಿಯಾಗುವಾಸೆ ಅನುಭವಿಯಾಗುವಾಸೆ
ಜಗದ ಜೋಲಿಯ ತೂಗೋ ರವಿಯಾಗುವಾಸೆ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಗುರಪ್ಪ ಹರೀಶ

ಕನ್ನಡ ಸಾಹಿತ್ಯಾಸಕ್ತಿ, ಲೇಖನ ಕವನ ರಚನೆ.ಕನ್ನಡ ಸಂಘಟನೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು,ಸಿಡ್ನಿಯಲ್ಲಿ ಕೆಲವು ವರ್ಷ ಕಾಯಕ ಮುಗಿಸಿ ಬೆಂಗಳೂರಿನಲ್ಲೀಗ ಮರಳಿ ಗೂಡಿಗೆ. ಹತ್ತಾರು ಲೇಖನಗಳನ್ನು ಬರೆದಿರುವ ಹರೀಶ ರವರು ಕನ್ನಡದ ವಿಷಯದಲ್ಲಿ ಚರ್ಚೆ,ಪತ್ರಿಕೆ ಪ್ರಕಟನೆಯ ವಿಮರ್ಶೆ ಇವರ ನೆಚ್ಚಿನ ಆಸಕ್ತಿ.


ಶ್ರೀ. ಗುರಪ್ಪ ಹರೀಶ ಅವರಿಂದ ಮತ್ತಷ್ಟು ಲೇಖನಗಳು


pictureಬಹುದಿನಗಳಿಂದ ಕಾಡುತ್ತಿತ್ತೆನ್ನನು ಒಂದು ಪ್ರಶ್ನೆ - ಹೆಣ್ಣೆಂದರೇನು ?
pictureಕವಿಯಾಗುವಾಸೆ

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026