ಉಗಾಭೋಗ (ದ)
ದಹಿಸಲು ಮುನ್ನಿನ ದೋಷವ
ದಹಿಸಲು ಮುನ್ನಿನ ದೋಷವ ನೆಲ್ಲವ ನಡೆದನು ವಾರಣಾಶಿಗೆ ಓಡಿ | ಮಹಸ್ಥಳ
ಹುಶಿಯಾಡುತ ವಿಪ್ರರ ವಂಚಿಸಿ ಅಲ್ಲಿಯ ಯಾತ್ರೆಯ ಮಾಡಿ | ವಹಿಲದಿ ವಂದಾರಾದರ
ಆಡಿದರುಂಬುದಿಲ್ಲೆಂಬುರು ಹೆಮ್ಮೆಯ ಕೂಡಿ | ಮಹಿಪತಿ ನಂದನ ಸಾರಿದ ಸ್ವಹಿತಕ ವ್ಯರ್ಥ
ಜನಕ ಸಾಧನ ನೋಡಿ ||೧||
ದಯದಿ ಸಲಹೊ ಜಯರಾಯ
ದಯದಿ ಸಲಹೊ ಜಯರಾಯ | ಕಾಗಿಣಿನಿಲಯ ಕವಿಜನಗೇಯ | ಯೋಗಿವರಿಯ
ಕೃಪಾಸಾಗರ ಸತತ | ಮರುತಸುಶಾಸ್ತ್ರಕೆ ವಿರಚಿಸಿ ಟೀಕೆಯ | ಮುರಿದು ಕುಭಾಷ್ಯವ ಮೆರೆದ
ಮಹಾತ್ಮಾ | ಭೀಮಭವಾಟವಿ ಧೂಮಧ್ವಜ ಸು | ತ್ರಾಮಜಸಖ ಸಿರಿ ಶ್ಯಾಮಸುಂದರನ
ಪ್ರಿಯ|
ದಾತನು ಎನಗೆ ನೀನು ಶ್ರೀಹರಿ ನಿನಗೆ
ದಾತನು ಎನಗೆ ನೀನು ಶ್ರೀಹರಿ ನಿನಗೆ |ದಾತನು ನಾನು ಬಹು ಮಾತುಗಳಾಡಲೇಕೆ
ಭವ- | ಭೀತಿಗೆಂದಿಗಂಜೆ ಪರಮಾತುಮಾ ನಿನ್ನ ಪಾದ ಬಹು-| ಪ್ರೀತಿಯಿಂದಲಿ ನೆನೆಯುವರ
ವಾತಮತ-| ದುತ್ತಮರ ಸೇವೆಯೊಳಿಟ್ಟು ಪೋಷಿಸೈ ಗುರುಶ್ರೀವಿಠಲ ಪ್ರಭೋ
ದಾಸನಾಗುವುದಕ್ಕೆ ಏಸೇಸು ಜನ್ಮದ
ದಾಸನಾಗುವುದಕ್ಕೆ ಏಸೇಸು ಜನ್ಮದ ಸುಕೃತ | ರವಿಕೋಟಿ ಭಾಸುರ ಶ್ರೀಶ
ಸುಗುಣವಂತ | ನಾಶರಹಿತ ನಿನ್ನ ದಾಸರ ದಾಸ್ಯವ | ಲೇಸಾಗಿ ಕೊಡುಕಂಡ್ಯ ಪುರಂದರವಿಠಲ
ದಾಸನಾದವನಿಗೆ ವೈಕುಂಠಲೋಕದಲ್ಲಿ
ದಾಸನಾದವನಿಗೆ ವೈಕುಂಠಲೋಕದಲ್ಲಿ ವಾಸ | ದಾಸನಾಗದವನೆಲ್ಲಿ ಪೋದರಾಭಾಸ |
ದಾಸನೆಂದೆನಿಸಿದ ಭಾರತಿಯ ಗಂಡ | ಸತ್ಯಲೋಕವನಾಳ್ವ ಶೌಂಡ | ದಾಸರ ಹೃದಯದಿ
ಮಿನುಗುವ ಶ್ರೀಶವಾಸವಾದಿವಂದ್ಯ | ದ್ವಿಸಾಶಿರಂಬಕ ಶರಣ್ಯ ದಾಸರಿಗೊಲಿವ | ಶ್ರೀಪುರಂದರವಿಠಲ
ದಾನವಾಂತಕ ಹರಿಯೆ ಜ್ಞಾನವನ್ನು
ದಾನವಾಂತಕ ಹರಿಯೆ ಜ್ಞಾನವನ್ನು ಕೊಡದೆ | ಮಾನವ ಜನುಮದೊಳಗೆ ಹಾಕಿ |
ಹಾನಿ ವೃದ್ಧಿಗಳಿಗೆ ಗುರಿಮಾಡಿ ನೀನು | ಕಾಣಿಸಿಕೊಳ್ಳದಲೆ ಪ್ರಾಣದೊಳಗೆ ಇದ್ದು | ತ್ರಾಣಗುಂದಿಸಿ
ಭವಕಾನನದಲ್ಲಿ ನೂಕಿ | ಶ್ವಾನಸೂಕರನಕಿಂತಾ ಕನಿಷ್ಠನ್ನ ಮಾಡಿ | ಬೇಸರಿಸುವುದು ಉಚಿತವೇನು
ಸ್ವಾಮಿ | ವಾಣಿಯರಸವಂದ್ಯ ಮುದ್ದುಮೋಹನ್ನವಿಠಲ | ಧ್ಯಾನಕ್ಕೆ ಪೊಳದು ಎನ್ನ
ಕಡೆಹಾಯಿಸೋ ಬೇಗ
ದಾರಿದ್ರ್ಯವೆಂಬ ರಕ್ಕಸಿ ಹಿಡಿದೆನ್ನ
ದಾರಿದ್ರ್ಯವೆಂಬ ರಕ್ಕಸಿ ಹಿಡಿದೆನ್ನ | ಹೀರಿ ಹಿಪ್ಪಿಮಾಡುತಾಳೆ ತಾಳಲಾರೆ | ಸಂಸಾರವೆಂಬ
ಮಾರಿಯಿಂದ ಬಲುನೊಂದೆನೋ | ಆರುಮಂದಿ ವೈರಿಗಳೆನ್ನ ಸುತ್ತಮುತ್ತ | ಹೋರಿ ತಮ್ಮ
ವಿಷಯಂಗಳಿಗೆನ್ನ ಸೆಳೆಯುತಾರೆ | ನಾರಾಯಣ ನಿನ್ನ ನಾಮಸ್ಮರಣೆಯಿತ್ತು | ಶ್ರೀ ರಾಮಕೃಷ್ಣ
ಎನ್ನ ನೀ ಸಲಹಯ್ಯ
ದಾನವಾರಿಯೆ ನಿಮಗೆ ದೈನ್ಯದಿಂ ಬೇಡುವೆನು
ದಾನವಾರಿಯೆ ನಿಮಗೆ ದೈನ್ಯದಿಂ ಬೇಡುವೆನು | ಪ್ರಾಣನೀಗಲು ಪುಸಿನುಡಿವ
ಪ್ರಸಂಗಬೇಡ | ನಾನು ಮಾಡಿದ ಕೃತಿಗೆ ಏನು ಶಿಕ್ಷಿಸಲು ಸರಿ | ಮಾನವೊಂದಮಾತ್ರ ರಕ್ಷಿಸು
ಶ್ರೀರಾಮ
ದಾಸಪುರಂದರನ ದಯಕೆ
ದಾಸಪುರಂದರನ ದಯಕೆ ಪಾತುರರಾದ | ವಾಸುದೇವವಿಠಲನ್ನ ದಾಸಜನರ |
ಲೇಸಾಗಿ ಸೇವಿಸುವ ಭಾಗ್ಯವೇಕೊಡು ಎನಗೆ | ಸೂಸಿ ಸುಖವುಂಬ ಸುರಲೋಕಕಂಕಿತ |
ಸುಖವಿತಿಲಕ ಭೂಸುರಶಿರೋರತುನ ಶ್ರೀ | ವ್ಯಾಸಮುನಿಪದಕಂಜಭೃಂಗರೆನಿಪ | ಶ್ರೀಶ
ಗುರುಕೃಷ್ಣನ್ನ ಭಜಕರ ಸಮೀಪದಲಿ | ವಾಸಮಾಡಿಸೋ ವರದಗೋಪಾಲವಿಠಲ
ದಾಸನಾಗುವನಿಗೆ ಕ್ಲೇಶಬಡಿಸದೆ ಒಲಿಯ
ದಾಸನಾಗುವನಿಗೆ ಕ್ಲೇಶಬಡಿಸದೆ ಒಲಿಯ | ರೆಕ್ಕೆ ಮುರಿದ ಪಕ್ಕಿ ಬಾಯಿಬಿಟ್ಟಂತೆ |
ಗಗನಕ್ಕೆ ಮೊಗವೆತ್ತಿ ಕೂಗುತಿಪ್ಪೆ | ಅಕ್ಕರೆ ನಿನಗಿನ್ನು ಬಾರದೇನಲೊ | ದೇವಕ್ಕಳೊಡೆಯ
ತ್ರಿಜಗದಲ್ಲಿ ನೀನು | ಠಕ್ಕಿಸಿ ಪೋಗುವೆಯಾ ಸರ್ವಜೀವಿಗಳೊಳು | ಯಾತಕ್ಕೆ ಎನ್ನೊಬ್ಬನ
ಪುಟ್ಟಿಸಿದೆ | ಪಕ್ಕದಾಸನು ನಾನು ವಿಜಯವಿಠಲ ನಿನ್ನ | ಲೆಕ್ಕಕ್ಕೆ ಮೊದಲಿಗನೆನಿಪೆನಯ್ಯ
ದಾಸನಾಗುವೆನೆಂದು ಆಸೆಮಾಡಲು
ದಾಸನಾಗುವೆನೆಂದು ಆಸೆಮಾಡಲು ಬಲು ಕ್ಲೇಶವಬಡಿಸುವ ಆ- | ಭಾಸವ ನುಡಿಸುವ
ನಾಶಮಾಡುವ ಸಕಲೈಶ್ವರ್ಯಗಳನೆಲ್ಲ | ಗ್ರಾಸವಾಸಕೆ ತರರೀಸನು ಪರರಿಂದ ಮೋಸವಾದ
ಭವ | ಕ್ಲೇಶಪಾಶದಿ ಬಿಗಿ ದ್ವೇಷವ ಮಾಡಿಸುವ ನೀಚರ ಕೈಯಿಂದ | ಕಾಸಿನವನ ಮಾಡಿ
ಬೀಸಿ ಬಿಸಾಡುವ ಲೇಸು ನಮ್ಮ ವಿಜಯವಿಠಲನು
ದೊರೆತನವುಂಟೆಂದು ಗರ್ವಿಸಲು ಬೇಡ
ದೊರೆತನವುಂಟೆಂದು ಗರ್ವಿಸಲು ಬೇಡ | ಸಿರಿ ನಮಗಿಲ್ಲೆಂದು ಜರಿದು ನಿಂದಿಸಬೇಡ |
ನಿನ್ನಂಥ ಒಡೆಯರು ಎನಗುಂಟು ನಿನಗಿಲ್ಲ | ಎನ್ನನೀ ಕಾಯೊ ಅಚಲಾನಂದವಿಠಲ ||೧||
ದೇವ ತಪ್ಪಿಲ್ಲದೆ ಅವಗುಣವಿಲ್ಲದೆ
ದೇವ ತಪ್ಪಿಲ್ಲದೆ ಅವಗುಣವಿಲ್ಲದೆ | ಒಬ್ಬರೊಬ್ಬರ ಮರೆಹೊಗುವರೆ | ಮರೆಹೊಕ್ಕರೆ
ಕಾವರಿಲ್ಲದೆ ಅಲ್ಲಿ ಕುಲಾಚಾರ್ಯನಾಗಿ ದುಃಖ ಭೀತನಾಗಿ | ಮರೆಹೊಕ್ಕೆ ಕಾಯೊ
ಅಚಲಾನಂದವಿಠಲ |
ದೈತ್ಯನ್ನ ವಧೆಗಾಗಿ ಶಪಥಮಾಡಲಾಗಿ
ದೈತ್ಯನ್ನ ವಧೆಗಾಗಿ ಶಪಥಮಾಡಲಾಗಿ | ಕೃತ್ತಿವಾಸನು ದ್ವಾರಕೃಪೆಯು ಮಾಡಿ | ಸುತ್ತ
ಕಾದಿದ್ದ ಆಪ್ತಮಿತ್ರರ ರಕ್ಷಿಸುತಿರೆ | ಕತ್ತಲೆಗೈಸಿ ಶಿರಕಿತ್ತಿ ಚಂಡಾಡಿಸಿ | ಭಕ್ತನ ಪ್ರತಿಜ್ಞೆ
ಗೆಲಿಸಿದಂಥ | ಸತ್ಯವಾದ ರೂಢಿ ತ್ರಿಜಗವು ಬಲ್ಲುದು | ಪೃಥ್ವಿಪಾಲಕನಾದ ಸಾರ್ವಭೌಮಂಗೆ
ಪರಮ | ರಿಕ್ತ ಅನುಬಂಧ ಪೇಳಿ ಹಿಗ್ಗುವಂತೆ | ಉತ್ತಮೋತ್ತಮ ನಿನ್ನ ಇನಿತು ತಿಳಿದು |
ಭಕ್ತಿಯಿಲ್ಲದೆ ಸಟೆಯಿಂದ ನುಡಿದಂಥ | ಉಕ್ತಿಗೆ ವ್ಯಾಹತಿತಂದುದಕ್ಕೆ ನಿನ್ನ | ಮಿತ್ರತ್ವ
ಏನುಂಟು ಇದರೊಳಗೆ | ಭೃತ್ಯರ ಅಭಿಮಾನ ಕಾಯದಿದ್ದರೆ ಒಡೆಯ | ಕೀರ್ತಿಯೈದುವನೇನೊ
ಮಾನ್ಯನಾಗಿ | ಸತ್ಯಸಂಕಲ್ಪ ಗುರುವಿಜಯವಿಠಲರೇಯ | ಈತೆರದಲಿ ಮಾಡದಲಿರು ಎಂದಿಗಾನ |