ಪ್ರತಿಮೆಗೆ ಜೀವಬಂದಾಗ

ಭಕ್ತ ಅಥವಾ ಸಂತನಿಗೆ ನಿರ್ಜೀವ ವಸ್ತುವೆಂಬುದೇ ಇಲ್ಲ.ಎಲ್ಲದರಲ್ಲೂ ಪ್ರಾಣವಿದೆ. ಭಕ್ತನು ಎಲ್ಲದರಲ್ಲೂ ಪ್ರಾಣ ಪ್ರತಿಷ್ಠೆ ಮಾಡುತ್ತಾನೆ .
ನರ್ಸಿಮೆಹ್ತ ಅವರನ್ನು ಒಬ್ಬ ರಾಜನು " ಓ ನರ್ಸಿ ! ನೀನು ಸತ್ಯವಂತನಾಗಿದ್ದು , ಶ್ರೀಕೃಷ್ಣನ ವಿಶ್ವಾಸದ ಭಕ್ತನಾಗಿದ್ದರೆ ಆ ಕೃಷ್ಣನ ವಿಗ್ರಹವು ಚಲಿಸಲಿ " ಎಂದ . ನರ್ಸಿಮೆಹ್ತಾನ ಪೂಜಾಫಲದಿಂದ ವಿಗ್ರಹವು ಚಲಿಸಿತು . ಶಿವಲಿಂಗದ ಮುಂದಿರುವ ಪವಿತ್ರವಾದ ನಂದಿ ತುಳಸೀದಾಸರು ನೀಡಿದ ಆಹಾರವನ್ನು ಸೇವಿಸಿತು.
ಮೀರಾಬಾಯಿಯ ಬಳಿ ಇದ್ದ ಕೃಷ್ಣನ ಪ್ರತಿಮೆ ಅವಳೊಡನೆ ಆಟವಾಡುತ್ತಿತ್ತು , ಅದರಲ್ಲಿ ಸಂಪೂರ್ಣ ಜೀವ , ಪ್ರಾಣವಿತ್ತು . ಅದು ಅವಳಿಗೆ ಗೋಚರವಾಗುತ್ತಿತ್ತು . ಅಪ್ಪಯ್ಯ ದೀಕ್ಷಿತರು ದಕ್ಷಿಣದ ತಿರುಪತಿಗೆ ದೇವಾಲಯದಲ್ಲಿ ದೇವರ ದರ್ಶನಕ್ಕೆ ಹೋದಾಗ ವೈಷ್ಣವರು ಅವರಿಗೆ ಪ್ರವೇಶ ನೀಡಲಿಲ್ಲ .
ಮಾರನೇದಿನ ಬೆಳಿಗ್ಗೆ ಅವೆರೆಲ್ಲರು ದೇವರನ್ನು ಕಂಡಾಗ ವಿಷ್ಣುವು ಶಿವನಾಗಿ ಮಾರ್ಪಟ್ಟಿತ್ತು. ಇದರಿಂದ ಆಶ್ಚರ್ಯದಿಂದ ಪುರೋಹಿತರು ಗಲಿಬಿಲಿಗೊಂಡು ಅಪ್ಪಯ್ಯ ದೀಕ್ಷಿತರ ಕ್ಷಮೆ ಕೋರಿ ಮತ್ತೆ ವಿಷ್ಣು ಪ್ರತಿಮೆ ಆಗುವಂತೆ ಮಾಡಬೇಕೆಂದು ಬೇಡಿದರು . ದಕ್ಷಿಣ ಭಾರತದ ದಕ್ಷಿಣ ಕನ್ನಡದ ಉಡುಪಿಯಲ್ಲಿರುವ ಶ್ರೀಕೃಷ್ಣನ ಮಹಾಭಕ್ತ ಕನಕದಾಸ . ಕನಕದಾಸರು ನೀಚಕುಲದವರೆಂದು , ದೇವಾಲಯದ ಪ್ರವೇಶ ನಿಷೇಧಿಸಿದರು . ಆಗ ಕನಕದಾಸರು ದೇವಾಲಯದ ಹಿಂದೆ ಇದ್ದ ಚಿಕ್ಕ ಕಿಟಕಿಯ ಬಳಿ ಹೋಗಿ ಕುಳಿತರು . ಭಕ್ತಿ ಪರವಶರಾಗಿ ಶ್ರೀಕೃಷ್ಣನ ಕೀರ್ತನೆಗಳನ್ನು ಹಾಡಲು ತೊಡಗಿದರು . ಅಸಂಖ್ಯಾತ ಜನರು ಭಾವದ ಮೋಡಿಗೆ ಒಳಗಾದರು . ಭಕ್ತಿಯ ತೀವ್ರತೆಯಲ್ಲಿ ಮುಳುಗಿ ಹೋದರು . ಆಗ ಶ್ರೀ ಕೃಷ್ಣನು ಹಿಂಭಾಗಕ್ಕೇ ತಿರುಗಿ ಕನಕನಿಗೆ ದರ್ಶನ ನೀಡಿದನು . ಅಲ್ಲಿನ ಶ್ರೋತ್ರಿಯರು ಆಶ್ಚರ್ಯ ಚಕಿತರಾದರು . ಇಂದಿಗೂ ಭಕ್ತರು, ಕನಕದಾಸರು ಶ್ರೀಕೃಷ್ಣನ ಕಂಡ ಕಿಂಡಿಯಿಂದಲೇ ದೇವರ ದರ್ಶನ ಪಡೆಯಬೇಕು.
ವಿಗ್ರಹವೇ ದೇವರ ಪ್ರತಿರೂಪ. ಮಂತ್ರದ ಸಾಕಾರ ರೂಪ .ಅದರಲ್ಲಿ ನೀವು ಕಾಣುವ ಜೀವವೇದೈವ ದೈವದ ಆಕಾರ/ರೂಪದ ಬಗ್ಗೆ ಎಲ್ಲರಲ್ಲೂ ಉದ್ಭವಿಸುವ ಪ್ರಶ್ನೆಯೆಂದರೆ ಯಾವ ಕಲೆಗಾರ ಅಥವಾ ಶಿಲ್ಪಿ ಕಂಡಿದ್ದ ಈ ಸ್ವರೂಪಗಳನ್ನು?ಎಂದು. ಅದಕ್ಕೆ ಉತ್ತರ "ಯುಗಾವತಾರ ರಾಮಕೃಷ್ಣ" ಎಂಬ ಕೃತಿಯಲ್ಲಿ ಕಾಣಬಹುದು.ರಾಮಕೃಷ್ಣರು ಪ್ರತಿಮೆಯ ಪೂಜೆ ವಿರೋಧಿಸಿ ಪ್ರಶ್ನಿಸಿದವರಿಗೆ ಹಣ್ಣುಗಳನ್ನು ತೋರಿಸಿ, "ಏನಿದು? "ಎಂದರು,ಅದಕ್ಕೆ ಉತ್ತರ "ಅಹಾ ಇದೆಂಥಾ ಸುಲಭವಾದ ಪ್ರಶ್ನೆ !ಇವು ಹಣ್ಣುಗಳು" ,ಅದಕ್ಕೆ ರಾಮಕೃಷ್ಣರು"ಅವು ನಿಜವಾದ ಹಣ್ಣುಗಳಲ್ಲ,ಮಣ್ಣಿನಿಂದ ಮಾಡಿ ಬಣ್ಣಬಳೆಯಲಾಗಿದೆ ಆಶ್ಚರ್ಯವೇ?"ಎಂದರು. ಅವು ನಿಜವಾದ ಹಣ್ಣುಗಳ ಹಾಗೇ ಕಾಣುತ್ತಿದ್ದವು."ಹಾಗಿದ್ದರೆ ಇದನ್ನು ನೋಡಿದಾಗ ಹಣ್ಣಿನಹಾಗೇ ಕಾಣಬಲ್ಲದಾದರೆ,ಪ್ರತಿಮೆಯೂ ಹಾಗೇ ಭಗವಂತನ ತದ್ರೂಪ ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ.ಭಕ್ತನು ದೇವಾಲಯದಲ್ಲಿರುವ ದೈವ ಪ್ರತಿಮೆಯನ್ನು ಅದೇ ಭಕ್ತಿ ಗೌರವಗಳಿಂದ ಆರಾಧನಾ ಭಾವದಿಂದ ಕಾಣಬೇಕು .