ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮೆಟ್ಟಿಲು:(ಹಾಸ್ಯ)

picture

ರಾಜ ಅಕ್ಬರ್ ತನ್ನ ಮಂತ್ರಿ ಬೀರಬಲ್ಲನ ಜೊತೆ ಒಮ್ಮೆ ವಿಹಾರಕ್ಕೆಂದು ಉದ್ಯಾನವನದಲ್ಲಿ ವಿಹರಿಸುತ್ತಿದ್ದನು. ರಾಜನು ಬೀರಬಲ್ಲನನ್ನು ಚೇಷ್ಟೆ ಮಾಡಲೆಂದು ಬೀರಬಲ್ ನೀನು ನಿನ್ನ ಹೆಂಡತಿಯಕೈಯಲ್ಲಿ ಎಷ್ಟು ಬಳೆಗಳಿವೆ ಎಂದು ನೋಡಿರುವೆಯಾ ಎಂದ.ಅದಕ್ಕೆ ಉತ್ತರವಿಲ್ಲದೆ ಬೀರಬಲ್ ಗೊತ್ತಿಲ್ಲವೆಂದು ತಲೆಯಾಡಿಸಿದ.ಅಕ್ಬರ್ "ಅರೆ ನೀನು ದೀನಾಗಲೂ ಊಟ ಬಡಿಸುವ ನಿನ್ನಾಕೆಯ ಕೈಬಳೆ ಎಷ್ಟಿವೆ ಎಂದೇ ನೋಡೀಲ್ಲವೇ" ಎಂದು ನಕ್ಕ. ಸ್ವಲ್ಪ ಹೊತ್ತಿನ ಬಳಿಕ ಬೀರಬಲ್ ಅಕ್ಬರನನ್ನು ಕುರಿತು ಕೇಳಿದ "ಪ್ರಭು ನೀವು ಪ್ರತಿದಿನ ಈ ಉದ್ಯಾನವನಕ್ಕೆ ಬರುತ್ತೀರಲ್ಲವೆ?"....."ಹೌದು"......ಹಾಗಿದ್ದರೆ ನಿಮ್ಮ ಉದ್ಯಾನವನದಲ್ಲಿ ಒಟ್ಟು ಎಷ್ಟು ಮೆಟ್ಟಿಲುಗಳಿವೆ?" ಎಂದ. ಅಕ್ಬರ್ ತನ್ನ ತಪ್ಪನ್ನರಿತು ಸ್ನೇಹದ ನಗೆ ಚೆಲ್ಲಿದ.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026