ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೆಕ್ಕು ಬಾವುಲಿ

picture

ಮರದಿಂದ ಮರಕ್ಕೆಹಾರುತ್ತಾ ಬಾವುಲಿಯೊಂದು ನೆಲಕ್ಕೆ ಬಿದ್ದಿತು.ಹಸಿದ ಬೆಕ್ಕೊಂದು ಹತ್ತಿರದಲ್ಲೇ ಅವಿತು ಕುಳಿತಿತ್ತು.ನೆಲಕ್ಕೆ ಬಿದ್ದ ಬಾವುಲಿಯನ್ನು ಕಂಡಿತು. ಬೆಕ್ಕು ತಕ್ಷಣ ಅದರ ಮೇಲೆರಗಿತು,ಭಯಗೊಂಡ ಬಾವುಲಿ "ನನ್ನನ್ನು ಕೊಲ್ಲಬೇಡ" ಎಂದು ಬೇಡಿಕೊಂಡಿತು.ಆಗ ಬೆಕ್ಕು"ಪಕ್ಷಿಗಳು ನಮ್ಮ ಆಜನ್ಮ ಶತ್ರುಗಳು ಅವನ್ನು ನಾವೆಂದೂ ಜೀವಸಹಿತ ಬಿಡೆವು"ಎಂದಿತು.ತಕ್ಷಣ ಬಾವುಲಿ "ನಾವು ಇಲಿಗಳ ಜಾತಿಗೆ ಸೇರಿದವರು, ಪಕ್ಷಿಯಲ್ಲ" ಎಂದಿತು.ಬೆಕ್ಕು ಬಾವುಲಿಯನ್ನು ಕೊಲ್ಲದೆ ಹಾಗೇ ಬಿಟ್ಟಿತು.ಸ್ವಲ್ಪ ದಿನಗಳ ಬಳಿಕ ಮತ್ತೊಮ್ಮೆ ಆ ಬಾವುಲಿ ಹಾರಾಡುತ್ತಿರಲು ನೆಲಕ್ಕೆ ಬಿದ್ದಿತು ಆದರೆ ಈ ಬಾರಿ ಬೇರೊಂದು ಬೆಕ್ಕು ಅದನ್ನು ಹಿಡಿಯಿತು.ಬಾವುಲಿ ಮತ್ತದೇ ರೀತಿ ಪ್ರಾಣಭಿಕ್ಷೆ ಬೇಡಿತು.ಬೆಕ್ಕು ತಾನು ಇಲಿಗಳನ್ನು ಮಾತ್ರ ತಿನ್ನುವುದು ಎಂದಿತು. ಕೂಡಲೇ ಬಾವುಲಿ ಆದರೆ ನಾನು ಇಲಿಯಲ್ಲ..... ನಾನು ಪಕ್ಷಿ ಜಾತಿಗೆ ಸೇರಿದವ" ಎಂದಿತು.ಅದನ್ನು ನಂಬಿದ ಬೆಕ್ಕು ಬಾವುಲಿಯನ್ನು ಕೊಲ್ಲದೇ ಹಾಗೇ ಬಿಟ್ಟಿತು.
ಸಮಯಕ್ಕೆ ತಕ್ಕ ಉತ್ತರ ಪ್ರಾಣವನ್ನು ಉಳಿಸಿತು


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023