ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅನುಕೂಲ

picture

ಬೆಸ್ತನೊಬ್ಬ ಪ್ರತಿದಿನವೂ ತಾನು ಹಿಡಿದ ಮೀನುಗಳನ್ನು ಒಂದು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದ.ದಾರಿಯಲ್ಲಿ ಒಂದು ನರಿಗೆ ಅಷ್ಟೊಂದು ಮೀನುಗಳನ್ನು ನೋಡಿ ಬಾಯಿಯಲ್ಲಿ ನೀರೂರಿ ಬಂದಿತು.ಹೇಗಾದರೂ ಮಾಡಿ ಮೀನುಗಳನ್ನು ತಿನ್ನಬೇಕೆಂದು ಉಪಾಯದಿಂದ ಬೆಸ್ತ ಬರುವ ದಾರಿಯಲ್ಲಿ ಸತ್ತಂತೆ ಮಲಗಿತು,ಬೆಸ್ತನು ಇರಲಿ ಈ ಸತ್ತ ನರಿಯ ಚರ್ಮವನ್ನು ಮಾರಿ ಹಣವನ್ನು ಪಡೆಯಬಹುದು ಎಂದು ಆಲೋಚಿಸಿ ನರಿಯನ್ನು ಎತ್ತಿ ಗಾಡಿಯಲ್ಲಿ ಮೀನುಗಳಿದ್ದ ಕಡೆ ಹಾಕಿದನು. ದಾರಿಯುದ್ದಕ್ಕೂ ನರಿ ಹೊಟ್ಟೆತುಂಬುವಷ್ಟು ಮೀನುಗಳನ್ನು ಕಬಳಿಸಿತು.ಬೆಸ್ತನಿಗೆ ತಿಳಿಯದ ಹಾಗೆ ಕೆಳಕ್ಕೆ ಜಿಗಿದು ಕಾಡಿಗೆ ಓಡಿತು,ಇದನ್ನು ಕಂಡ ತೋಳವೊಂದು "ಆ ಗಾಡಿಯಲ್ಲಿ ನೀನೇನು ಮಾಡುತ್ತಿದ್ದೆ?"ಎಂದು ವಿಚಾರಿಸಲು,ನರಿ ನಡೆದದ್ದೆಲ್ಲಾ ವಿವರಿಸಿತು.ತೋಳವೂ ಥಟ್ಟನೆ ಓಡಿ ತಾನೂ ಆ ಬೆಸ್ತನ ಗಾಡಿಯ ಮುಂದೆ ಸತ್ತಂತೆ ಮಲಗಿತು.ಬೆಸ್ತನಿಗೆ ಮತ್ತಷ್ಟು ಸಂತೋಷವಾಗಿ ಆ ತೋಳದ ಚರ್ಮವನ್ನು ಮಾರಿ ಹಣ ಮಾಡಬಹುದೆಂದು ಅದನ್ನು ಎತ್ತಲು ಹೋದನು ತೋಳವು ಭಾರವಾಗಿದ್ದ ಕಾರಣ ಒಂದು ಗೋಣಿ ಚೀಲದಲ್ಲಿ ಅದನ್ನು ತಳ್ಳಿ ಬಿಗಿಯಾಗಿ ಕಟ್ಟಿ ಗಾಡಿಯೊಳಕ್ಕೆ ಧೊಪ್ಪೆಂದು ಎಸೆದು ಮುಂದೆ ಸಾಗಿದನು.ತೋಳಕ್ಕೆ ಒಂದು ಮೀನನ್ನೂ ತಿನ್ನಲಾಗಲಿಲ್ಲ.ಮನೆಗೆ ಬಂದಾಗ ಬೆಸ್ತನು ಚೀಲವನ್ನು ಬಿಚ್ಚಿದಕೂಡಲೇ ಪ್ರಾಣ ಭೀತಿಯಿಂದ ಕಾಡಿನ ಕಡೆ ಓಡಿತು

ನೀತಿ: ಒಬ್ಬರಿಗಾದ ಅನುಕೂಲ ಮತ್ತೊಬ್ಬರಿಗೂ ಆಗದೇ ಇರಬಹುದು



 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023