ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕೆಲಸಕ್ಕೆ ಬಾರದ್ದು

picture

ಒಂಟೆ ಮರಿಯೊಂದು ತನ್ನ ತಾಯಿ ಒಂಟೆಯನ್ನು ಕೇಳಿತು"ಅಮ್ಮಾ ನಮಗೆ ಬೆನ್ನಿನಮೇಲೆ ಏಕೆ ಉಬ್ಬು ಇದೆ?".ಅದಕ್ಕೆ ತಾಯಿ ಒಂಟೆ"ಮಗೂ ಮರಳುಗಾಡಿನಲ್ಲಿ ಹೆಚ್ಚುದಿನಗಳ ಕಾಲ ನೀರು ಸಿಗದಿದ್ದರೂ ನಮ್ಮ ಬೆನ್ನಿನಲ್ಲಿ ನೀರು ಶೇಖರಿಸಿಡಲು ಭಗವಂತ ಕೊಟ್ಟಿದ್ದು"ಎಂದಿತು. "ಅಮ್ಮಾ ನಮ್ಮ ಕಾಲುಗಳು ಮಾತ್ರ ತೆಳ್ಳಗೆ ಮತ್ತು ಪಾದಗಳೇಕೆ ಇಷ್ಟು ಅಗಲವಾಗಿವೆ?" ಎಂದು ಮರಿ ಪ್ರಶ್ನಿಸಿತು.ತಾಯಿ ಒಂಟೆ "ಮಗೂ ಮರಳುಗಾಡಿನಲ್ಲಿ ಸಡೆಯಲು ಹಾಗಿದ್ದರೆ ಅನುಕೂಲ"ಎಂದಿತು.ಮರಿ ಮತ್ತೆ "ಅಲ್ಲಮ್ಮ ನಮ್ಮ ಕಣ್ಣಿನ ರೆಪ್ಪೆಗಳೇಕೆ ಇಷ್ಟೊಂದು ಉದ್ದವಾಗಿ ದಟ್ಟವಾಗಿದೆ?"ಎಂದು ಕೇಳಿತು.ತಾಯಿ "ಅದು ಮರಳುಗಾಡಿನಲ್ಲಿ ಸುಂಟರಗಾಳಿ ಬೀಸಿದಾಗ ಧೂಳಿನಿಂದ ನಮ್ಮ ಕಣ್ಣನ್ನು ಕಾಪಾಡುತ್ತದೆ ಮಗೂ ಅದೂ ಒಂಟೆಗಳಿಗೆ ದೇವರ ಕೊಡುಗೆ" ಎಂದು ಉತ್ತರಿಸಿತು. ಅದಕ್ಕೆ "ಹಾಗದರೆ ನಡಿ ಹೋಗೋಣ ಮರಳುಗಾಡಿಗೆ,ಈ ಮೃಗಾಲಯದಲ್ಲಿ ಏನು ಕೆಲಸ?"ಎಂದಿತು ಮೃಗಾಲಯದಲ್ಲೇ ಜನಿಸಿದ್ದ ಒಂಟೆ ಮರಿ.
ನೀತಿ:ಕೆಲಸಕ್ಕೆ ಬಾರದ ವಿದ್ಯೆ, ಬುದ್ಧಿ, ಹಣಬಲ,ತೋಳ್ ಬಲ,ಅಧಿಕಾರ.....ಏನಿದ್ದರೇನು? ಎಷ್ಟಿದ್ದರೇನು?


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023