ತೆನ್ನಾಲಿ ರಾಮ !

ಕೃಷ್ಣದೇವರಾಯನ ಆಸ್ಥಾನಕ್ಕೊಮ್ಮೆ ಚೀನಾದೇಶದ ರಾಯಭಾರಿ ಬಂದಾಗ ಕೆಲವು ಸೇಬುಗಳನ್ನು ತಂದ.ರಾಜನಿಗೆ ಅದನ್ನು ಒಪ್ಪಿಸುವಾಗ "ಸ್ವಾಮಿ ಈ ಹಣ್ಣನ್ನು ತಿಂದವರು ಅತಿ ಹೆಚ್ಚು ಕಾಲ ಬದುಕುತ್ತಾರೆ" ಎಂದ.ಪಕ್ಕದಲೇ ಇದ್ದ ತೆನ್ನಾಲಿ ರಾಮ ಒಂದು ಹಣ್ಣನ್ನು ತೆಗೆದು ಕಡಿದೇ ಬಿಟ್ಟ.ರಾಜನಿಗೆ ಬಹಳ ಕೋಪ ಬಂದಿತು"ನನಗಾಗಿ ತಂದ ಹಣ್ಣನ್ನು ನೀನೇಕೆ ಕಡಿದೆ?ಈತನ ತಲೆಯನ್ನೇ ಕಡಿಯಿರಿ" ಎಂದು ಸೇವಕರಿಗೆ ಆಜ್ಞೆ ಮಾಡಿದ.ರಾಮಕೃಷ್ಣ "ಅರೆ ಹಣ್ಣನ್ನು ಸ್ವಲ್ಪ ಕಡಿದದ್ದಕ್ಕೇ ತಲೆ ದಂಡವೇ? ಇನ್ನು ಇಡೀ ಹಣ್ಣನ್ನು ತಿಂದವನ ಗತಿ!"ಎಂದು ಗೊಣಗಿದ.ಕೃಷ್ಣದೇವರಾಯನಿಗೆ ತನ್ನ ತಪ್ಪಿನ ಅರಿವಾಯಿತು.ಮುಗುಳ್ನಕ್ಕು ಮತ್ತೊಂದು ಸೇಬನ್ನು ತೆನ್ನಾಲಿ ರಾಮನಿಗೆ ಕೊಟ್ಟ.