ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕೋಳಿಯ ತಂತ್ರ

picture

ಒಮ್ಮೆ ತೋಳವೊಂದು ತೋಟದೊಳಕ್ಕೆ ನುಗ್ಗಿ ಏನೂ ಸಿಗದೆ ಒಂದು ಕೋಳಿಯನ್ನು ಹಿಡುದು ಓಡತೊಡಗಿತು.ಅದನ್ನು ಕಂಡು ಆ ತೋಟದ ಯಜಮಾನ "ಏಯ್ ಹಿಡಿಯಿರಿ ಆ ತೋಳವನ್ನು,ಹೊಡೆಯಿರಿ, ನನ್ನ ಕೋಳಿಯನ್ನು ಕಚ್ಚಿಕೊಂಡು ಹೋಗುತ್ತಿದೆ" ಎಂದು ಕೂಗಿದ.ಆಗ ತೋಳದ ಬಾಯಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಕೋಳಿ"ಅಯ್ಯೋ ನನ್ನನು ಬಿಡಬೇಡ,ನನ್ನ ಯಜಮಾನ ತುಂಬಾ ಕೆಟ್ಟವನು ನನ್ನನ್ನು ಯಾವಾಗಲೂ ಹೊಡೆಯುತ್ತಾನೆ,ನನಗೆ ಅವನ ಬಳಿ ಹೋಗಲು ಇಷ್ಟವಿಲ್ಲ,ಅದಕ್ಕಿಂತ ತೋಳದ ಹೊಟ್ಟೆ ಸೇರುವುದೇ ಲೇಸು ಎಂದು ಹೇಳು ತೋಳಣ್ಣಾ, ಹೇಳು" ಎಂದು ಅರಚಿತು,ತಕ್ಷಣ ಆ ತೋಳ "ಹೇ ಯಜಮಾನ ನಿನ್ನ ಕೋಳಿಗೆ ನಿನ್ನ ಬಳಿ ಬರಲು ಇಷ್ಟವಿಲ್ಲ"ಎಂದು ಕೂಗಲು ಕೂಡಲೆ ಕೋಳಿ ಅದರ ಬಾಯಿಯಿಂದ ಜಾರಿ ನೆಲೆಕ್ಕೆ ಬಿದ್ದಿತು,ಚಂಗನೆ ಪಕ್ಕದಲ್ಲಿದ್ದ ಮರದ ಮೇಲೆ ಹಾರಿ ಕುಳಿತುಕೊಂಡಿತು.ನಂತರ ಆ ತೋಳ ಹೊರಟು ಹೋದ ಬಳಿಕ ತನ್ನ ಯಜಮಾನ ಬರುವವರೆಗೂ ಅಲ್ಲೇ ಕುಳಿತುಕೊಂಡಿತ್ತು.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023