ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಆರನೇ ಮಹಡಿ?

picture

ಆರು ಜನ ಹುಡುಗಿಯರು ಒಮ್ಮೆ ತಮ್ಮ ಗೆಳೆಯರನ್ನು ಬಿಟ್ಟು ತಾವೇ ಒಂದು ಹೋಟೆಲ್ ಗೆ ಹೋದರು.ಅದೂ ಸಹ ಆರು ಮಹಡಿಯುಳ್ಳ ಕಟ್ಟಡವೇ ಆಗಿತ್ತು.ಅಲ್ಲಿಗೆ ತಲುಪಿದ ಕೂಡಲೇ ಲಿಫ್ಟ್ ಏರಿ ಮೊದಲ ಮಹಡಿಗೆ ಹೋದರು ಅಲ್ಲಿ ಗೋಡೆಗೆ ಒಂದು ಫಲಕ ತೂಗಿ ಬಿಡಲಾಗಿತ್ತು.ಅದರ ಮೇಲೆ "ಇಲ್ಲಿರುವ ಹುಡುಗರೆಲ್ಲಾ ಕುಳ್ಳರು ಮತ್ತು ಬಡವರು"ಎಂದಿತ್ತು.ತಕ್ಷಣ ಆ ಹುಡುಗಿಯರು ಎರಡನೇ ಮಹಡಿಗೆ ಲಿಫ್ಟ್ ಚಲಾಯಿಸಿದರು ಅಲ್ಲಿಯೂ ಒಂದು ಫಲಕವಿತ್ತು.ಅದರ ಮೇಲೆ "ಇಲ್ಲಿರುವ ಹುಡುಗರೆಲ್ಲಾ ಎತ್ತರದವರು ಆದರೆ ಹಣವಂತರಲ್ಲ"ಎಂದಿತ್ತು.ಸರಿ ಮುಂದಿನ ಮಹಡಿಗೆ ಏರಿದರು.ಅಲ್ಲಿನ ಫಲಕದ ಮೇಲೆ "ಇಲ್ಲಿನ ಹುಡುಗರು ಸಿರಿವಂತರು ಆದರೆ ಬಹಳ ಕುಳ್ಳರು"ಎಂದಿತ್ತು.ನಾಲ್ಕನೇ ಮಹಡಿಗೆ ತೆರಳಲು ಅಲ್ಲಿ"ಇಲ್ಲಿನ ಹುಡುಗರು ಎತ್ತರವಾಗಿಯೂ ಹಣವಂತರಾಗಿಯೂ ಇದ್ದಾರೆ,ಆದರೆ ಅವರುಗಳು ಕುರೂಪಿಗಳು"ಎಂದಿತ್ತು.ಐದನೆಯ ಮಹಡಿಗೆ ಬಂದಿಳಿಯಲು ಅಲ್ಲಿನ ಫಲಕದ ಮೇಲೆ"ಇಲ್ಲಿನ ಹುಡುಗರು ಎತ್ತರವಾಗಿಯೂ, ಹಣವಂತರಾಗಿಯೂ ಸುಂದರವಾಗಿಯೂ ಇದ್ದಾರೆ"ಎಂದಿತ್ತು.ಹುಡುಗಿಯರು ಕುತೂಹಲ ತಡೆಯಲಾಗಲಿಲ್ಲ ಆರನೆಯ ಮಹಡಿಗೂ ಹತ್ತಿದರು.ಅಲ್ಲಿನ ಫಲಕದ ಮೇಲೆ ಹೀಗೆ ಬರೆದಿತ್ತು - "ಇಲ್ಲಿ ಯಾವ ಹುಡುಗರೂ ಇಲ್ಲ ಈ ಮಹಡಿ ಕಟ್ಟಿರುವ ಉದ್ದೇಶವೇನೆಂದರೆ ಹುಡುಗಿಯರಿಗೆ ತೃಪ್ತಿ ಅನ್ನುವುದೇ ಇಲ್ಲ ಎಂದು ಸಾಬೀತು ಮಾಡಲು"
ನೀತಿ: ಸಾಮಾನ್ಯ ಮನುಜನಿಗೆ ಎಷ್ಟು ಗಳಿಸಿದರೂ ತೃಪ್ತಿ ಎಂಬುದೇ ಇಲ್ಲ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023