ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅಳಿಲು

picture

ಸಿಂಹದ ಸ್ನೇಹ ಮಾಡಿದ ಒಂದು ಅಳಿಲು ತನ್ನ ಕಾಡಿನ ರಾಜನ ಮೇಲಿನ ಭಕ್ತಿಯಿಂದಾಗಿ ನಿಷ್ಟೆಯಿಂದ ಅದರ ಸೇವೆ ಮಾಡತೊಡಗಿತು.ಅದನ್ನು ಮೆಚ್ಚಿದ ಸಿಂಹವು "ಅಯ್ಯಾ ಅಳಿಲೇ, ಹೀಗೇ ನನ್ನ ಸೇವೆ ಮಾಡುತ್ತಿರು ನಿನಗೆ ನಿನ್ನ ನಿವೃತ್ತಿಯ ಹೊತ್ತಿಗೆ ಒಂದು ಚೀಲದಷ್ಟು ಬಾದಾಮಿಯನ್ನು ಕೊಡುವೆ" ಎಂದಿತು.ಅಳಿಲು ಬಾದಾಮಿಯ  ಆಸೆಯಿಂದಿ ಆ ದಿನವನ್ನೇ ನೆನೆಯುತ್ತಾ, "ಆಹಾ ಮಿಕ್ಕ ಅಳಿಲುಗಳು ಜೀವನವಿಡೀ ಅಲೆದರೂ ಸಿಗದಷ್ಟು ಬಾದಾಮಿ ನನಗೆ ದೊರೆಯುತ್ತದೆ" ಎಂದು ಜಂಭದಿಂದ ಅಲೆದಾಡುತ್ತಾ ಇತ್ತು. ಹೀಗೇ ಎಡಬಿಡದೆ ನಿಷ್ಟೆಯಿಂದ ಗಜರಾಜನ ಸೇವೆ ಮಾಡುತ್ತಿರಲು ಒಂದು ಒಮ್ಮೆ ಆದಿನ ಬಂದೇ ಬಿಟ್ಟಿತು.ಅಳಿಲು ಇಳಿಯ ವಯಸ್ಸಿಗೆ ಬರಲು ಸಿಂಹವು ಅದಕ್ಕೆ ಒಂದು ಚೀಲ ಬಾದಾಮಿ ಕೊಟ್ಟು ಕಳಿಸಿತು.ಆದರೆ ಬಹುದಿನಗಳಿಂದ ಆಸೆ ಹೊತ್ತುಕೊಂಡಿದ್ದ ಅಳಿಲಿಗೆ ಅದನ್ನು ಕಂಡು ಬೇಸರವಾಯಿತು,ಏಕೆಂದರೆ ಅವನ್ನು ಕಡಿಯಲು ಅದರ ಬಾಯಿಯಲ್ಲಿ ಹಲ್ಲುಗಳೇ ಇಲ್ಲವಾಗಿದ್ದವು.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023