ಬುದ್ಧಿ ಮಾತು

ಮನೆಯ ಮುಂದಿನ ಬೇಲಿಯ ಹಿಂದೆ ಒಣಗಿ ಹೋಗಿದ್ದ ದೊಡ್ಡ ಮರವೊಂದು ಇತ್ತು.ಮನೆಯ ಮಾಲೀಕನಿಗೆ ಪಕ್ಕದ ಮನೆಯವನು"ಒಣಗಿದ ಮರ ಮನೆಯಮುಂದಿರುವುದು ಒಳ್ಳೆಯದಲ್ಲ,ಏನೋ ಅನಾಹುತ ಆಗುವ ಮೊದಲು ಅದನ್ನು ಕತ್ತರಿಸಿ"ಎಂದ. ಅದರಂತೆ ಮಾಲೀಕ ಒಣಗಿದ್ದ ಮರವನ್ನು ಕೆಡವಿದ.ಬೇಲಿಯಿಂದ ಹೊರಗೆ ಎಳೆದು ರಸ್ತೆಯ ಬದಿಗೆ ತಂದು ಹಾಕಿದ.ಪಕ್ಕದ ಮನೆಯವನು ತನ್ನ ಮಗನೊಡನೆ ಬಂದು"ಹಾಗಾದರೆ ಈ ಮರ ನಿಮಗೆ ಬೇಡಾ?"ಎಂದ.ಅದಕ್ಕೆ ಉತ್ತರ ಏನು ಹೇಳಬೇಕೆಂದು ತೋಚದೆ"ಊಹು"ಎಂದ.ಕೂಡಲೇ ಪಕ್ಕದಮನೆಯಾತ ತನ್ನ ಮಗನ ಸಹಾಯದಿಂದ ತಮ್ಮ ಮನೆಗೆ ಎಳೆದುಕೊಂಡು ಹೋಗಿ ಒಲೆ ಉರಿಸಲು ಬಳಸಲು,ಕತ್ತರಿಸಲಾರಂಭಿಸಿದ. "ಮರ ಕಡಿದ್ದಿದ್ದಕ್ಕೆ ಯಾವ ಒಳ್ಳೆಯದೂ ನನಗಾಗಲಿಲ್ಲ,ಆದರೆ ಪಕ್ಕದಮನೆಯವನಿಗೆ ಆಗಿದ್ದು ಖಂಡಿತ"ಎಂದು ಪೆಚ್ಚಾಗಿ ಕುಳಿತ.
ನೀತಿ: ಬುದ್ಧಿವಂತರು ಒಳ್ಳೆಯ ಮಾತಿನಿಂದ ಬೇರೆಯವರ ಕೈಯಲ್ಲಿಯೇ ತಮ್ಮ ಕೆಲಸವನ್ನೂ ಮಾಡಿಸಿಕೊಳ್ಳಬಲ್ಲರು.