ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬುದ್ಧಿ ಮಾತು

picture

ಮನೆಯ ಮುಂದಿನ ಬೇಲಿಯ ಹಿಂದೆ ಒಣಗಿ ಹೋಗಿದ್ದ ದೊಡ್ಡ ಮರವೊಂದು ಇತ್ತು.ಮನೆಯ ಮಾಲೀಕನಿಗೆ ಪಕ್ಕದ ಮನೆಯವನು"ಒಣಗಿದ ಮರ ಮನೆಯಮುಂದಿರುವುದು ಒಳ್ಳೆಯದಲ್ಲ,ಏನೋ ಅನಾಹುತ ಆಗುವ ಮೊದಲು ಅದನ್ನು ಕತ್ತರಿಸಿ"ಎಂದ. ಅದರಂತೆ ಮಾಲೀಕ ಒಣಗಿದ್ದ ಮರವನ್ನು ಕೆಡವಿದ.ಬೇಲಿಯಿಂದ ಹೊರಗೆ ಎಳೆದು ರಸ್ತೆಯ ಬದಿಗೆ ತಂದು ಹಾಕಿದ.ಪಕ್ಕದ ಮನೆಯವನು ತನ್ನ ಮಗನೊಡನೆ ಬಂದು"ಹಾಗಾದರೆ ಈ ಮರ ನಿಮಗೆ ಬೇಡಾ?"ಎಂದ.ಅದಕ್ಕೆ ಉತ್ತರ ಏನು ಹೇಳಬೇಕೆಂದು ತೋಚದೆ"ಊಹು"ಎಂದ.ಕೂಡಲೇ ಪಕ್ಕದಮನೆಯಾತ ತನ್ನ ಮಗನ ಸಹಾಯದಿಂದ ತಮ್ಮ ಮನೆಗೆ ಎಳೆದುಕೊಂಡು ಹೋಗಿ ಒಲೆ ಉರಿಸಲು ಬಳಸಲು,ಕತ್ತರಿಸಲಾರಂಭಿಸಿದ. "ಮರ ಕಡಿದ್ದಿದ್ದಕ್ಕೆ ಯಾವ ಒಳ್ಳೆಯದೂ ನನಗಾಗಲಿಲ್ಲ,ಆದರೆ ಪಕ್ಕದಮನೆಯವನಿಗೆ ಆಗಿದ್ದು ಖಂಡಿತ"ಎಂದು ಪೆಚ್ಚಾಗಿ ಕುಳಿತ.

ನೀತಿ: ಬುದ್ಧಿವಂತರು ಒಳ್ಳೆಯ ಮಾತಿನಿಂದ ಬೇರೆಯವರ ಕೈಯಲ್ಲಿಯೇ ತಮ್ಮ ಕೆಲಸವನ್ನೂ ಮಾಡಿಸಿಕೊಳ್ಳಬಲ್ಲರು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023