ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸಾಕ್ಷಿ

picture

ಬಡ ರೈತನೊಬ್ಬ ತನ್ನ ಜಮೀನು ಬಿತ್ತಲು ಬೀಜ ಗೊಬ್ಬರ ಕೊಳ್ಳಲು ಹಣವಿಲ್ಲದೆ ಊರಿನ ಸಾಹುಕಾರನ ಬಳಿ ಒಂದು ಸಾವಿರ ರೂಪಾಯಿಯನ್ನು ಸಾಲವಾಗಿ ಪಡೆದನು.ಮಳೆಗಾಲಕ್ಕೆ ಮುನ್ನ ನೆಲವನ್ನು ಉತ್ತು ಆ ಹಣದಲ್ಲಿ ತಂದ ಬೀಜ ಬಿತ್ತು ಒಳ್ಳೆಯ ಫಲ ಪಡೆದು ತನ್ನ ಕುಟುಂಬಕ್ಕೆ ಆಗುವಷ್ಟು ಇಟ್ಟುಕೊಂಡು ಉಳಿದ್ದನ್ನು ಮಾರಿದ ಬಳಿಕ ಸಾಹುಕಾರನ ಹಣವನ್ನೂ ಬಡ್ಡಿ ಸಮೇತವಾಗಿ ಹಿಂತಿರುಗಿಸಲು ಬಂದನು.ಸಾಹುಕಾರನು ತನ್ನ ಮನೆಯ ಅಂಗಳದ ಕಾರಂಜಿಯ ಮೇಲೆ ಕುಳಿತಿದ್ದ ಅಪರೂಪದ ಒಂದು ಬಣ್ಣಬಣ್ಣದ ಪುಟ್ಟ ಪಕ್ಷಿಯನ್ನು ನೋಡುತ್ತಾ ಕುಳಿತಿದ್ದನು.ರೈತನೂ ಅದನ್ನು ಕಣ್ತುಂಬ ನೋಡಿ ಅನಂದ ಪಟ್ಟು ಹಣವನ್ನು ಹಿಂತಿರುಗಿಸಿ ಕೊಟ್ಟು ಹೊರಟುಹೋದನು.
ಸ್ವಲ್ಪ ಕಾಲದ ಬಳಿಕ ಸಾಹುಕಾರನು ಕೆಟ್ಟ ಯೋಜನೆ ಮಾಡಿ ಮತ್ತೆ ರೈತನಿಗೆ ತಾನು ಕೊಟ್ಟ ಹಣ ಕೊಡು ಎಂದ.ಬಡ ರೈತನು ಇದನ್ನು ಕೇಳಿ ಗಾಬರಿಗೊಂಡನು.ಇಬ್ಬರಿಗೂ ವಾದಕ್ಕಿಳಿಯಿತು.ನ್ಯಾಯ ಕೇಳಲು ಊರ ಪಟೇಲನ ಬಳಿ ಹೋದರು.ರೈತ ಸಾಹುಕಾರನ ಬಳಿ ಪಡೆದ ಹಣವನ್ನು ಕೆಲ ದಿನಗಳ ಹಿಂದೆಯೇ ಹಿಂದಿರುಗಿಸಿದ ವಿಷಯ ತಿಳಿಸಿದ.ಸಾಹುಕಾರ ಇದನ್ನು ಸುಳ್ಳು ಎಂದು ವಾದ ಮಾಡಿದ.ಹಣ ಪಡೆದ ನಂತರ ರೈತನು ತನ್ನ ಮನೆಯ ಕಡೆಯೇ ತಿರುಗಿ ಬಂದಿಲ್ಲ ಎಂದ.ರೈತ ತಾನು ಬಂದ ದಿನ ವೇಳೆಯನ್ನು ತಿಳಿಸಿದ, ಆದರೂ ಸಾಹುಕಾರ ತನ್ನ ಹಟ ಬಿಡಲೇ ಇಲ್ಲ.ರೈತ ತಾನು ಬಂದಾಗ ಸಾಹುಕಾರನು ಮನೆಯ ಅಂಗಳದಲ್ಲಿ ಇದ್ದನೆಂದೂ , ಆತನ ಹೆಗಲ ಮೇಲೆ ಒಂದು ಸುಂದರ ಪಕ್ಷಿ ಕುಳಿತಿತ್ತು ಎಂದೂ ಹೇಳಿದ.ತಕ್ಷಣ ಸಾಹುಕಾರನು "ಸುಳ್ಳು ಪಕ್ಷಿ ನನ್ನ ಹೆಗಲ ಮೇಲೆ ಕುಳಿತಿರಲಿಲ್ಲ,ಅದು ಕಾರಂಜಿಯ ಮೇಲೆ ಇತ್ತು"ಎಂದ.ಕೂಡಲೇ ಸತ್ಯವನ್ನು ಅರಿತ ಪಟೇಲ ಸಾಹುಕಾರನಿಗೆ ನೂರು ರೂಪಯಿ ದಂಡ ವಿಧಿಸಿ ಕ್ಷಮೆ ಯಾಚಿಸಲು ಹೇಳಿದ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026