ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬಂದೂಕು ಇದೆ ಎಚ್ಚರ

picture

 ಓರ್ವ ಮುದುಕ ತನ್ನ ಹೊಲದಲ್ಲಿ ಆಲೂಗಡ್ಡೆ ಬೆಳೆಯುವ ಆಸೆ ಇಟ್ಟುಕೊಂಡಿದ್ದ.ಆದರೆ ವಯಸ್ಸು ದೇಹಸ್ಥಿತಿ ನೆನೆದು ಕೈಲಾಗದೆ ವ್ಯಥೆಯಿಂದ ನೊಂದಿದ್ದ.ಇದ್ದ ಒಬ್ಬ ಮಗನು ತಪ್ಪುಮಾಡಿ ಸಿಕ್ಕು ಜೈಲಿನಲ್ಲಿ ಇದ್ದ.ಮುದುಕ ಮಗನಿಗೆ ಒಂದು ಪತ್ರ ಬರೆದ"ಮಗ ನಿನ್ನ ತಾಯಿಗೆ ನಮ್ಮ ಹೊಲದಲ್ಲಿ ಆಲೂಗಡ್ಡೆ ಬೆಳೆಯುವ ಆಸೆಇತ್ತು.ನನಗೋ ಕೈಲಾಗದು ನೀನು ನೋಡಿದರೆ ಜೈಲಿನಲ್ಲಿ ಕೊಳೆಯುತ್ತಿರುವೆ,ಆಳುಗಳನ್ನಿಟ್ಟಾದರೂ ಬೆಳೆತೆಗೆಯೋಣ ಅಂತಿದ್ದೇನೆ, ಆದರೆ ಅದಕ್ಕೂ ಹಣ ಬೇಕು,ಈಗೇನು ಮಾಡಲಿ?" ಅದಕ್ಕೆ ಉತ್ತರವಾಗಿ ಮಗ"ಅಪ್ಪಾ ದಯವಿಟ್ಟು ಆ ನೆಲ ಅಗೆಯಬೇಡಿ ಅಲ್ಲಿ ನಾನು ಬಂದೂಕುಗಳನ್ನು ಅಡಗಿಸಿಟ್ಟಿದ್ದೇನೆ ಎಚ್ಚರ"ಎಂದು ಬರೆದ.ಮರುದಿನ ಬೆಳಗಾಗುವಷ್ಟರಲ್ಲೇ ಪೋಲೀಸರು ನೆಲವನ್ನೆಲ್ಲಾ 2/3 ಅಡಿ ಅಗೆದು ಕೆದಕಿ ನೋಡಿದರು.ಬಂದೂಕುಗಳು ಸಿಗಲಿಲ್ಲ.ಮುದುಕ ನಡೆದ ವಿಷಯ ಮಗನಿಗೆ ಪತ್ರ ಬರೆದು ತಿಳಿಸಿದ. ಆಗ ಮಗ"ಅಪ್ಪಾ ಈಗ ತಾನೇ ನೆಲ ಅಗೆಯುವ ಕೆಲಸ ಮಾಡಿದ್ದಾಗಿದೆ ಇನ್ನು ಆಲೂಗಡ್ಡೆ ಬಿತ್ತುವುದಷ್ಟೇ ಬಾಕಿ,ನನ್ನಿಂದಾದಷ್ಟು ನಾನು ಮಾಡಿಸಿದ್ದೇನೆ.ಅಲ್ಲಿ ಬಂದೂಕೂ ಇಲ್ಲ ಏನೂ ಇಲ್ಲ"ಎಂದು ಬರೆದ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023