ಬಂದೂಕು ಇದೆ ಎಚ್ಚರ

ಓರ್ವ ಮುದುಕ ತನ್ನ ಹೊಲದಲ್ಲಿ ಆಲೂಗಡ್ಡೆ ಬೆಳೆಯುವ ಆಸೆ ಇಟ್ಟುಕೊಂಡಿದ್ದ.ಆದರೆ ವಯಸ್ಸು ದೇಹಸ್ಥಿತಿ ನೆನೆದು ಕೈಲಾಗದೆ ವ್ಯಥೆಯಿಂದ ನೊಂದಿದ್ದ.ಇದ್ದ ಒಬ್ಬ ಮಗನು ತಪ್ಪುಮಾಡಿ ಸಿಕ್ಕು ಜೈಲಿನಲ್ಲಿ ಇದ್ದ.ಮುದುಕ ಮಗನಿಗೆ ಒಂದು ಪತ್ರ ಬರೆದ"ಮಗ ನಿನ್ನ ತಾಯಿಗೆ ನಮ್ಮ ಹೊಲದಲ್ಲಿ ಆಲೂಗಡ್ಡೆ ಬೆಳೆಯುವ ಆಸೆಇತ್ತು.ನನಗೋ ಕೈಲಾಗದು ನೀನು ನೋಡಿದರೆ ಜೈಲಿನಲ್ಲಿ ಕೊಳೆಯುತ್ತಿರುವೆ,ಆಳುಗಳನ್ನಿಟ್ಟಾದರೂ ಬೆಳೆತೆಗೆಯೋಣ ಅಂತಿದ್ದೇನೆ, ಆದರೆ ಅದಕ್ಕೂ ಹಣ ಬೇಕು,ಈಗೇನು ಮಾಡಲಿ?" ಅದಕ್ಕೆ ಉತ್ತರವಾಗಿ ಮಗ"ಅಪ್ಪಾ ದಯವಿಟ್ಟು ಆ ನೆಲ ಅಗೆಯಬೇಡಿ ಅಲ್ಲಿ ನಾನು ಬಂದೂಕುಗಳನ್ನು ಅಡಗಿಸಿಟ್ಟಿದ್ದೇನೆ ಎಚ್ಚರ"ಎಂದು ಬರೆದ.ಮರುದಿನ ಬೆಳಗಾಗುವಷ್ಟರಲ್ಲೇ ಪೋಲೀಸರು ನೆಲವನ್ನೆಲ್ಲಾ 2/3 ಅಡಿ ಅಗೆದು ಕೆದಕಿ ನೋಡಿದರು.ಬಂದೂಕುಗಳು ಸಿಗಲಿಲ್ಲ.ಮುದುಕ ನಡೆದ ವಿಷಯ ಮಗನಿಗೆ ಪತ್ರ ಬರೆದು ತಿಳಿಸಿದ. ಆಗ ಮಗ"ಅಪ್ಪಾ ಈಗ ತಾನೇ ನೆಲ ಅಗೆಯುವ ಕೆಲಸ ಮಾಡಿದ್ದಾಗಿದೆ ಇನ್ನು ಆಲೂಗಡ್ಡೆ ಬಿತ್ತುವುದಷ್ಟೇ ಬಾಕಿ,ನನ್ನಿಂದಾದಷ್ಟು ನಾನು ಮಾಡಿಸಿದ್ದೇನೆ.ಅಲ್ಲಿ ಬಂದೂಕೂ ಇಲ್ಲ ಏನೂ ಇಲ್ಲ"ಎಂದು ಬರೆದ.