ಅಪಾಯ!

ದೂರದ ಹಳ್ಳಿಯ ರೈತನ ತೋಟದ ಮನೆಯಲ್ಲಿ ಹತ್ತಾರು ಸಾಕು ಪ್ರಾಣಿಗಳು ಇದ್ದವು.ಅದರಲ್ಲಿ ಹಸು,ಹಂದಿ,ಕೋಳಿ,ಇಲಿ ಆತ್ಮೀಯ ಗೆಳೆಯರು.ಒಮ್ಮೆ ಮನೆಯ ಯಜಮಾನ ಹೆಂಡತಿಯೊಡನೆ ತನ್ನ ಕೋಣೆಯಲ್ಲಿ ಮಲಗುವ ಮೊದಲು ಪಿಸುಗುಡುತ್ತಾ ಒಂದು ಪೊಟ್ಟಣ ತೆಗೆದ.ಅದರಲ್ಲಿ ಒಂದು ಇಲಿ ಹಿಡಿಯುವ ಬೋನ್ ಇತ್ತು.ಮಂಚದಡಿಯಿಂದ ಇಲಿ ಎಲ್ಲವನ್ನೂ ಗಮನಿಸಿತು ಅವರಾಡಿದ ಮಾತನ್ನೂ ಆಲಿಸಿತು.ತಕ್ಷಣ ಗಾಬರಿಯಿಂದ ಓಡಿಹೋಗಿ ಕೋಳಿಗೆ "ಅಯ್ಯೋ ಅಪಾಯ ಅಪಾಯ ಇಲಿ ಬೋನ್ ತಂದಿದ್ದಾರೆ"ಹೇಳಿತು.ಆದರೆ ಕೋಳಿ"ಅಯ್ಯೋ ಅಷ್ಟೇ ತಾನೆ ನಾನೇನೋ ಅಂತಿದ್ದೆ"ಎಂದು ಕಾಳು ಹೆಕ್ಕುತಾ ಮುಂದೆ ಸಾಗಿತು.ಆನಂತರ ಇಲಿ ಹಂದಿಗೆ ವಿಷಯ ತಿಳಿಸಿತು.ಹಂದಿಯೂ ಅಷ್ಟು ಆಸಕ್ತಿ ತೋರಿಸಲಿಲ್ಲದ ಕಾರಣ ಇಲಿ ಹಸುವಿನ ಬಳಿ ಹೋಗಿ ಹೇಳಿತು.ಅದೂ ಸಹ "ಅರೆ ಬಿಡು ಅದೇನೂ ಅಂಥಾ ಅಪಾಯ ಅಲ್ಲ,ಏನೂ ಆಗಲ್ಲ"ಎಂದಿತು.ಆರಾತ್ರಿ ಎಲ್ಲರೂ ಮಲಗಿರಲು ಇದ್ದಕ್ಕಿದ್ದ ಹಾಗೆ ಪಟಾರ್ ಎಂದು ಶಬ್ದ.ಇಲಿ ಸಿಕ್ಕಿಬಿದ್ದಿದೆಯೇನೋ ಎಂದು ರೈತಹ ಹೆಂಡತಿ ಎದ್ದು ಬೋನಿನ ಬಳಿ ಬಂದು ನೋಡಲು ವಿಷದ ಹಾವೊಂದು ಅದಕ್ಕೆ ಸಿಕ್ಕು ನರಳಾಡುತ್ತಿತ್ತು. ಆಕೆ ದೀಪ ಹಿಡಿದು ನೋಡುವಷ್ಟರಲ್ಲಿ ಆ ಬೋನನ್ನೇ ಎಳೆದಾಡುತ್ತಾ ಆಕೆಗೆ ಹಾವು ಕಚ್ಚಿತು.ಜೋರಾಗಿ ಕಿರುಚಿದಳು.ಅಕ್ಕಪಕ್ಕದ ಮನೆಯವರೆಲ್ಲಾ ಎದ್ದರು.ರೈತ ಓಡಿ ಹೋಗಿ ವೈದ್ಯರನ್ನು ಕರೆತಂದನು.ಚಿಕಿತ್ಸೆ ನಡೆಯಿತು.ರಾತ್ರಿಯಿಡೀ ಎದ್ದಿರಲು ಹೇಳಿದರು ವದ್ಯರು.ಸರಿ ಬಂದ ನೆರೆಹೊರೆಯವರು ಜೊತೆಯಲ್ಲೇ ಕುಳೀತರು.ರೈತನಿಗೆ ಅವರಿಗೆಲ್ಲಾ ಉಪಚಾರ ಮಾಡಬೇಕಾಯಿತು.ತನ್ನಲ್ಲಿದ್ದ ಕೋಳಿಯನ್ನು ಕೊಂದು ಅವರಿಗೆಲ್ಲಾ ಸಾರು/ಸೂಪ್ ಮಾಡಿಕೊಟ್ಟ.ಮರುದಿನದಿಂದ ಹಳ್ಳಿಯವರೆಲ್ಲಾ ಆಕೆಯನ್ನು ನೋದಲು ಬರತೊಡಗಿದರು.ತನ್ನಲ್ಲಿದ್ದ ಹಂದಿಯನ್ನು ಕೊಂದು ಬಂದ ನಂಟಿಷ್ಟರಿಗೆ ಅಡುಗೆ ಮಾಡಿ ಬಡಿಸಿದ.ಆದರೆ ವಿಷದ ಹಾವಿನ ಕಡಿತದಿಂದ ರೈತನ ಹೆಂಡೈ ಹೆಚ್ಚುದಿನ ಬದುಕುಳಿಯಲಿಲ್ಲ.ಅಸುನೀಗಿದಳು.ಶವ ಸಂಸ್ಕಾರ ಹನ್ನೊಂದು ದಿನದ ನಂತರ ಸಮಾರಾಧನೆಗೆ ತನ್ನಲ್ಲಿದ್ದ ಒಂದು ಹಸುವನ್ನೂ ಕಡಿದು ಬಂದ ನಂಟಿಷ್ಟರಿಗೆ ಬೇಯಿಸಿ ಬಡಿಸಿದ.ಇಲಿ ತಾನು ಮೊದಲೇ ಎಚ್ಚರಿಕೆ ಕೊಟ್ಟಾಗ ಏನಾದರೂ ಸಹಾಯ/ಉಪಾಯ ಮಾಡಿದ್ದರೆ ಇಷ್ಟು ಅನಾಹುತ ನಡೆಯುವಷ್ಟೇ ಇರಲಿಲ್ಲವೇ ಎಂದು ಪಶ್ಚಾತ್ತಾಪ ಪಟ್ಟಿತು.ಕಾಲ ಮಿಂಚಿತ್ತು. ನೀತಿ:ಸ್ನೇಹಿತ/ಸಂಸಾರದಲ್ಲಿ ಒಬ್ಬರಿಗೆ ತೊಂದರೆಯಾದರೂ ಎಲ್ಲರಿಗೂ ಅದರ ಪರಿಣಾಮವಾಗುತ್ತದೆ.