ಬಹುಮಾನ (ಹಾಸ್ಯ)

ರೈತನಾದ ತಿಮ್ಮ ಒಂದು ದಿನ ತನ್ನ ತೋಟದಲ್ಲಿ ನಡೆದು ಹೋಗುತ್ತಿರಲು ಒಂದು ಆಷ್ಚರ್ಯವೇ ಗೋಚರವಾಯಿತು.ಆತನ ಹೊಲದಲ್ಲಿ ಆತನಿಗೇ ಕಾಣದಂತೆ ಬೆಳೆದ ಒಂದು ಅತಿ ದೊಡ್ಡ ಕುಂಬಳಕಾಯಿ ಅಂದು ಕಾಣಿಸಿತು.ಅದನ್ನು ಎತ್ತಲೂ ಸಹ ಆಗದಷ್ಟು ದೊಡ್ದದಾಗಿತ್ತು.ತನ್ನ ಮಕ್ಕಳ ಸಹಾಯ ಪಡೆದು ಅದನ್ನು ಆ ಊರಿನ ರಾಜನಿಗೆ ಒಪ್ಪಿಸಿದ. ರಾಜ ಅಪರೂಪದ ಆ ಅತಿ ದೊಡ್ದ ಕುಂಬಳಕಾಯನ್ನು ಕಂಡು ಸಂತೋಷಗೊಂಡು ಆತನಿಗೆ ಬೆಲೆಬಾಳುವ ರತ್ನದ ಸರವೊಂದನ್ನು ಕೊಟ್ಟ. ಈ ಸುದ್ದಿ ಎಲ್ಲೆಡೆ ಹರಡಿತು ಗುಂಡಣ್ಣನ ಕಿವಿಗೂ ಬಿತ್ತು. "ಅರೆ ಕುಂಬಳ ಕಾಯಿಗೇ ಅಷ್ಟು ಬೆಲೆ ಬಾಳುವ ಸರ ಕೊಟ್ಟ ರಾಜನು ತನ್ನಲ್ಲಿರುವ ಅಪರೂಪದ ಕಲ್ಲಿಗೆ(ವಜ್ರ) ಏನು ಕೊಡಬಹುದು?"ಎಂದು ಅದನ್ನು ರಾಜನಲ್ಲಿಗೆ ಹೋಗಿ ಅವನ ಕೈಗಿಟ್ಟ.ರಾಜನಿಗೆ ಅದನ್ನು ಕಂಡು ಸಂತೋಷವಾಯಿತು ಆದರೆ ಅದಕ್ಕೆ ಪ್ರತಿಯಾಗಿ ಏನು ಕೊಡಲು ತೋಚದೆ "ಆ ಅಪರೂಪದ ದೊಡ್ದ ಕುಂಬಳಕಾಯನ್ನು ಈತನಿಗೆ ನೀಡಿ ಎಂದು ಆಜ್ಞೆ ಮಾಡಿದ"ಗುಂಡ ಅದನ್ನು ತನ್ನ ಎತ್ತಿನ ಗಾಡಿಯ ಮೇಲೆ ಹೊತ್ತು ತೆಪ್ಪಗೆ ಮನೆಯ ಕಡೆ ಹೊರಟ.