ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸತ್ತವರು ಯಾರು? (ಹಾಸ್ಯ)

picture

 ಒಬ್ಬ ಮಸಣದಲ್ಲಿ ತನ್ನ ತಾಯಿಯ ಸಮಾಧಿಯ ಮೇಲೆ ಹೂವಿನ ಬೊಕ್ಕೆ ಇಟ್ಟು ಕೆಲ ನಿಮಿಶ ಮೌನ ಆಚರಿಸಿ ಹೊರಟ. ಇನ್ನೂ ಸ್ಮಶಾನದಿಂದ ಹೊರಟಿಲ್ಲ ಆಗ ಯಾರೋ ಜೋರಾಗಿ ಅಳುವ ಧ್ವನಿ ಕೇಳಿಸಿತು.ತಿರುಗಿ ನೋಡಿದ.ಒಬ್ಬಾತ ಒಂದು ಸಮಾಧಿಯ ಬಳಿ ತಲೆ ತಲೆ ಚಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ.ಅವನ ಬಳಿ ಹೋಗಿ "ಸಾರಿ ಸಾರ್ ನಿಮ್ಮ ಸ್ವಂತ ವಿಶಯ ಕೇಳಬಾರದು, ಆದರೆ ಯಾಕೆ ಸಾರ್ ಯಾರನ್ನ ಕಳೆದುಕೊಂಡು ಹೀಗೆ ಅಳುತ್ತಿದ್ದೀರಿ? ಮಗನಾ, ತಂದೇನಾ,ಅಣ್ಣಾನಾ,ತಮ್ಮಾನಾ?" ಎಂದ. ಅದಕ್ಕೆ ಉತ್ತರವಾಗಿ ಆತ"ನನ್ನ ಹೆಂಡತಿಯ ಮೊದಲ ಗಂಡ ಸಾsssರ್"ಎಂದು ಇನ್ನೂ ಜೋರಾಗಿ ಅಳಲು ಶುರುಮಾಡಿದ.

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023