ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕ್ರಿಕೆಟ್ (ಹಾಸ್ಯ)

picture

ನಿವೃತ್ತ ಮುದುಕನೊಬ್ಬ ಮುಂಬೈನ ಗಲ್ಲಿಯಲ್ಲಿ ವಾಸಿಸುತ್ತಿದ್ದ.ಅದೇ ಗಲ್ಲಿಯಲ್ಲಿ ಯುವಕರು ಪ್ರತಿದಿನ/ರಾತ್ರಿ ಕ್ರಿಕೆಟ್ ಆಡುತ್ತಿದ್ದರು.ಗಲಾಟೆ ತಾಳಲಾರದ ಅಲ್ಲಿನ ನಿವಾಸಿಗಳು ಎಷ್ಟು ಬೇಡಿಕೊಂಡರೂ ಅವರು ಬೇರೆಕಡೆ ಮೈದಾನಕ್ಕೆ ಹೋಗಲು ಒಪ್ಪುತ್ತಿರಲಿಲ್ಲ. ಮೊದಲೇ ವಾಹನಗಳ ಸದ್ದು ಅದರ ಜೊತೆಗೆ ಯುವಕರ ಕಿರುಚಾಟ ಮುದುಕನಿಗೆ ರೋಸಿ ಹೋಗಿತ್ತು.ಒಂದು ದಿನ ಯುವಕರನ್ನೆಲ್ಲಾ ಕರೆದು "ಹುಡುಗರೇ ನನಗೆ ಕ್ರಿಕೆಟ್ ಅಂದ್ರೆ ನನಗೆ ಬಹಳ ಇಷ್ಟ ,ನೀವು ದಯವಿಟ್ಟು ಇನ್ನು ಮುಂದೆ ಇಲ್ಲೇ ದಿನ/ ರಾತ್ರಿ ಕ್ರಿಕೆಟ್ ಆಡಿದರೆ ನಿಮಗೆ ವಾರಕ್ಕೆ 25 ರೂಪಾಯಿ ಕೊಡುತ್ತೇನೆ" ಎಂದ. ಹುಡುಗರೂ ಖುಷಿಯಿಂದ ಒಪ್ಪಿದರು.

         ವಾರ ಕಳೆಯಿತು ಒಪ್ಪಿದಂತೆ ಹಣವೂ ದೊರಕಿತು, ಮತ್ತೊಂದು ವಾರ ಕಳೆಯಿತು ಮುದುಕ ಬರೀ 20 ರೂಪಾಯಿ ಕೈಗಿಟ್ಟ, ಇರಲಿ , ಎಂದು ಹುಡುಗರು ಸಹಕರಿಸಿದರು. ಮುಂದಿನ ವಾರ ಬರೀ15 ರೂಪಾಯಿ ! ಅದರ ಮುಂದಿನ ವಾರ ಬರೀ 10 ರೂಪಾಯಿ!! ನಂತರ ವಾರ ಬರೀ 5 !!!

         "ಅರೆ ಏನ್ ಸ್ವಾಮೀ ವಾರಕ್ಕೆ 25 ರೂಪಾಯಿ ಅಂತ ಹೇಳಿ ಈಗ ಬರೀ 5 ಕ್ಕೆ ಇಳಿದಿದ್ದೀರ ? ಇದು ಯಾವ ನ್ಯಾಯ ?" ಅದಕ್ಕೆ ಮುದುಕ "ನೋಡ್ರಪ್ಪಾ ನನಗೆ ಪೆನ್ ಶನ್ ಹಣ ಬರೋದೇ ಕಡಿಮೆ ನನ್ನಿಂದ ವಾರಕ್ಕೆ 25 ರೂಪಾಯಿ ಕೊಡಕ್ಕಾಗಲ್ಲ" ಅಂದ, ಬೇಕೇ ಬೇಕೆಂದು ಹುಡುಗರು ಹಟ ಹಿಡಿದರು, ಆಗದೆಂದು ಮುದುಕ ಪಟ್ಟು ಹಿಡಿದ, ಕಡೆಗೆ ಕೋಪದಿಂದ ಮುದುಕ "ಆಗಲ್ಲಾ ಅಂದ್ರೆ ಆಗಲ್ಲ ಅದೇನ್ ಮಾಡ್ತೀರೋ ಮಾಡಿ ನೋಡೋಣ" ಎಂದ.ಹುಡುಗರು " ಲೇ ಬನ್ರೋ ಇನ್ಮೇಲೆ ಈ ಬೀದೀಲೇ ಕ್ರಿಕೆಟ್ ಆಡೋದು ಬೇಡ" ಎಂದು ಹೊರಟುಹೋದರು, ಮುದುಕನಿಗೆ ಬೇಕಾದ್ದೂ ಅದೇ ಅಲ್ವೇ ?

 


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023