ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ವಿಷ !

picture

ಜಲಜ ತನ್ನ ಮದುವೆಯಾದಾಗ್ಗಿನಿಂದ ತನ್ನ ಅತ್ತೆಯ ಜೊತೆ ಹೊಂದಿಕೊಳ್ಳಲುಸಾಧ್ಯವಾಗಲಿಲ್ಲ. ಏನಾದರೊಂದು ಕಾರಣ ಹುಡುಕಿ ಇಬ್ಬರೂ ಕಚ್ಚಾಡುವುದು, ಒಬ್ಬರನ್ನೊಬ್ಬರು ಶಪಿಸುವುದು ಸಾಮಾನ್ಯವಾಗಿಬಿಟ್ಟಿತ್ತು. ಅತ್ತೆ ಸೊಸೆಯರ ಜಗಳ ದಿನೇದಿನೇ ಬೆಳೆಯುತ್ತಾ ಜಲಜಳಿಗೆ ಒಮ್ಮೆ ರೋಸಿಹೋಗಿ ಒಬ್ಬ ಪಂಡಿತನ ಬಳಿಗೆ ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡು ಹಣ ಎಷ್ಟಾದರೂ ಸರಿ ಹೇಗಾದರೂ ಮಾಡಿ ತನ್ನ ಅತ್ತೆಗೆ ವಿಷ ಕುಡಿಸಿಯಾದರೂ ಕೊಲ್ಲುವ ಸಲಹೆ ಕೇಳಿದಳು. ವಿಚಾರವನ್ನು ನಿಧಾನವಾಗಿ ಪರಿಶೀಲಿಸಿದ ನಂತರ ಪಂಡಿತ "ಅಮ್ಮಾ ಜಲಜ ನಾನು ನಿನಗೆ ಒಂದು ಸೀಸೆ ವಿಷವನ್ನು ಕೊಡುತ್ತೇನೆ, ಆದರೆ ನೀನು ಇದನ್ನು ಪ್ರತಿದಿನ ಊಟದಲ್ಲಿ ಬೆರೆಸಿ ಕೊಡು,ನಿನ್ನತ್ತೆ ನಿಧಾನವಾಗಿ ಸಾಯುತ್ತಾಳೆ"ಎಂದ. ಕೂಡಲೇ ಆ ಸೀಸೆಯನ್ನು ಮನೆಗೆ ತಂದು ಎಂದಿನಂತೆ ಅತ್ತೆಯ ಕೂಡ ಕೋಪ ಮಾಡದೆ ಊಟೋಪಚಾರವನ್ನು ತಾನೇ ಮಾಡತೊಡಗಿದಳು. ಊಟದಲ್ಲಿ ವಿಷವನ್ನು ಮರೆಯದೇ ಬೆರೆಸಿ ಇನ್ನೇನು ಸ್ವಲ್ಪವೇ ಕಾಲ ಬದುಕಿರುವ ಅತ್ತೆಯ ಜೊತೆ ಸಂತೋಷದಿಂದ ಮಾತನಾಡುತ್ತಾ ಹೊಂದಿಕೊಳ್ಳುತ್ತಾ ಬಂದಳು. ಮೊದಮೊದಲು ಕಷ್ಟವೆನಿಸಿದರೂ ಹಾಗೇ ಹೊಂದಿಬಾಳುವುದು ಅಭ್ಯಾಸವಾಗಿ ದಿನಗಳು,ವಾರಗಳು ತಿಂಗಳುಗಳೇ ಕಳೆದವು.

ಅತ್ತೆಗೂ ತನ್ನ ತಪ್ಪುಗಳರಿವಾಗಿ ಜಲಜಳನ್ನು ಕ್ಷಮೆಕೇಳಿ ತಾನೂ ಆಕೆಯನ್ನು ಕ್ಷಮಿಸಿ ಸಂತೋಷದಿಂದ ಕಾಲ ಕಳೆದಳು. ಜಲಜಳಿಗೆ ಸಂಕಟವಾಗುತ್ತಾ ಬಂದಿತು ಇಷ್ಟೊಂದು ಒಳ್ಳೆಯ ಅತ್ತೆಯನ್ನು ತನ್ನಕೈಯ್ಯಾರೆ ಕೊಲ್ಲುವುದಾದರೂ ಹೇಗೆ" ಒಂದು ದಿನ ಪಂಡಿತನ ಬಳಿ ಓಡಿಬಂದು"ಸ್ವಾಮೀ ಪಂಡಿತರೇ ಹೇಗಾದರೂ ಮಾಡಿ ನನ್ನ ಅತ್ತೆಯನ್ನು ಉಳಿಸಿಕೊಡಿ ಅವರು ಸಾಯುವುದು ನನಗೆ ಇಷ್ಟವಿಲ್ಲ, ದಯೆಮಾಡಿ"ಎಂದು ಗೋಗರೆದಳು.ಅದಕ್ಕೆ ಪಂಡಿತನು "ಅಮ್ಮಾ ಜಲಜ ನೀನೇನೂ ಭಯಪಡಬೇಡ ನಿನ್ನ ಅತ್ತೆಗೆ ಏನೂ ಆಗದು,ನಾನಂದು ಕೊಟ್ಟಿದ್ದು ವಿಷವಲ್ಲ ನಿನ್ನಲ್ಲಿ ಈ ಬದಲಾವಣೆ ಕಾಣಲೆಂದು ಹಾಗೆ ಮಾಡಿದೆ"ಎಂದನು. ಜಲಜಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ತನ್ನೊಳಗಾದ ಬದಲಾವಣೆಯನ್ನು ಉಳಿಸಿಕೊಂಡು ಸಂಸಾರ ನಡೆಸಿದಳು.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026