ತೆನ್ನಾಲಿ ರಾಮ

ಒಂದು ದಿನ ತೆನ್ನಾಲಿ ರಾಮನ ಕೆಟ್ಟ ವರ್ತನೆಯನ್ನು ಕಂಡು ರಾಜನು ಅವನನ್ನು"ನನ್ನ ರಾಜ್ಯದಿಂದ ಹೊರಗೆ ತೊಲಗು" ಎಂದ.ಇದಾದ ಕೆಲವು ದಿನಗಳ ನಂತರ ರಾಜ ವಿಹಾರಕ್ಕೆಂದು ತನ್ನ ಕುದುರೆಯ ಮೇಲೆ ಸವಾರಿ ಹೊರಟಿರಲು ತೆನ್ನಾಲಿ ರಾಮನು ಒಂದು ಮರವನ್ನು ಏರುತ್ತಿರುವುದನ್ನು ಕಂಡನು."ಅರೆ ನೀನು ಇಲ್ಲಿ ಏನು ಮಾಡುತ್ತಿರುವೆ ನನ್ನ ರಾಜ್ಯ ಬಿಟ್ಟು ತೊಲಗು ಎನ್ನಲಿಲ್ಲವೇ"ಎಂದ.ಅದಕ್ಕೆ ತೆನ್ನಾಲಿ ರಾಮನು "ಪ್ರಭು ಎಲ್ಲಿ ಹೋದರೂ ಇದು ಕೃಷ್ಣದೇವ ರಾಯರ ಸಾಮ್ರಾಜ್ಯ ಎನ್ನುತ್ತಾರೆ ಜನ, ಅದಕ್ಕೆ ನೇರ ಸ್ವರ್ಗಕ್ಕೇ ಹೊರಟಿರುವೆ"ಎಂದ ಅವನ ಜಾಣ್ಮೆಯ ಮಾತನ್ನು ಕೇಳಿ ರಾಜ ನಕ್ಕು ಆಸ್ಥಾನಕ್ಕೆ ಹಿಂತಿರುಗಲು ಹೇಳಿದ.