ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ತೆನ್ನಾಲಿ ರಾಮ

picture

ಒಂದು ದಿನ ತೆನ್ನಾಲಿ ರಾಮನ ಕೆಟ್ಟ ವರ್ತನೆಯನ್ನು ಕಂಡು ರಾಜನು ಅವನನ್ನು"ನನ್ನ ರಾಜ್ಯದಿಂದ ಹೊರಗೆ ತೊಲಗು" ಎಂದ.ಇದಾದ ಕೆಲವು ದಿನಗಳ ನಂತರ ರಾಜ ವಿಹಾರಕ್ಕೆಂದು ತನ್ನ ಕುದುರೆಯ ಮೇಲೆ ಸವಾರಿ ಹೊರಟಿರಲು ತೆನ್ನಾಲಿ ರಾಮನು ಒಂದು ಮರವನ್ನು ಏರುತ್ತಿರುವುದನ್ನು ಕಂಡನು."ಅರೆ ನೀನು ಇಲ್ಲಿ ಏನು ಮಾಡುತ್ತಿರುವೆ ನನ್ನ ರಾಜ್ಯ ಬಿಟ್ಟು ತೊಲಗು ಎನ್ನಲಿಲ್ಲವೇ"ಎಂದ.ಅದಕ್ಕೆ ತೆನ್ನಾಲಿ ರಾಮನು "ಪ್ರಭು ಎಲ್ಲಿ ಹೋದರೂ ಇದು ಕೃಷ್ಣದೇವ ರಾಯರ ಸಾಮ್ರಾಜ್ಯ ಎನ್ನುತ್ತಾರೆ ಜನ, ಅದಕ್ಕೆ ನೇರ ಸ್ವರ್ಗಕ್ಕೇ ಹೊರಟಿರುವೆ"ಎಂದ ಅವನ ಜಾಣ್ಮೆಯ ಮಾತನ್ನು ಕೇಳಿ ರಾಜ ನಕ್ಕು ಆಸ್ಥಾನಕ್ಕೆ ಹಿಂತಿರುಗಲು ಹೇಳಿದ.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2018