ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬಾವಿ-ನೀರು

picture

ಅಕ್ಬರ್ ರಾಜನ ಬಳಿ ನ್ಯಾಯಕ್ಕಾಗಿ ಆಗಾಗ್ಗೆ ಜನರು ಬರುತ್ತಿದ್ದರು. ಹಾಗೇ ಒಮ್ಮೆ ರೈತನೊಬ್ಬ ಮತ್ತೊಬ್ಬ ರೈತನಿಂದ ಒಂದು ಬಾವಿಯನ್ನು ಖರೀದಿಸಿದ್ದ.ಆ ಬಾವಿಯನ್ನು ಕೊಳ್ಳಲು ಹಣ ಕೊಟ್ಟಿದ್ದರೂ ಮತ್ತೆ ನೀರಿಗೂ ಹಣ ಕೊಡು ಎಂದು ಹಟ ಮಾಡುತ್ತಿದ್ದ ಆ ಮತ್ತೊಬ್ಬ.ಆಗ ರಾಜ ಅಕ್ಬರ್ ಇದಕ್ಕೆ ತಕ್ಕ ನ್ಯಾಯ ಬೀರಬಲ್ಲನೇ ಕೊಡಬಲ್ಲನೆಂದು ಆತನನ್ನು ಕರೆಸಿದ.ಬೀರಬಲ್ ಕೊಂಚ ಸಮಯ ಯೋಚಿಸಿ "ಅಯ್ಯಾ ನೀನು ಬಾವಿಯನ್ನು ಮಾರಿದೆ ಎಂದು ಹೇಳಿದೆ,ಹಾಗಾದರೆ ಬಾವಿ ಮಾತ್ರ ಆತನಿಗೆ ಸೇರಿದೆ,ನೀರು ನಿನ್ನದು ಇಷ್ಟು ದಿನ ಆ ನೀರನ್ನು ಆತ ತನ್ನ ಬಾವಿಯಲ್ಲಿ ಇಟ್ಟುಕೊಂಡಿದ್ದಕ್ಕೆ ನೀನೇ ಬಾಡಿಗೆ ಕೊಡಬೇಕು,ಇಲ್ಲವೇ ನೀರನ್ನು ಮಾತ್ರ ವಾಪಸ್ ತೆಗೆದುಕೋ"ಎಂದು ಬುದ್ಧಿವಂತಿಕೆಯ ಮಾತನ್ನಾಡಿದ.ಆ ಮಾತನ್ನು ಕೇಳಿ ಆ ಕುಹಕ ಬುದ್ಧಿಯ ರೈತ ತಲೆಬಾಗಿ ಕ್ಷಮೆ ಯಾಚಿಸಿದ.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025