ಬಾವಿ-ನೀರು

ಅಕ್ಬರ್ ರಾಜನ ಬಳಿ ನ್ಯಾಯಕ್ಕಾಗಿ ಆಗಾಗ್ಗೆ ಜನರು ಬರುತ್ತಿದ್ದರು. ಹಾಗೇ ಒಮ್ಮೆ ರೈತನೊಬ್ಬ ಮತ್ತೊಬ್ಬ ರೈತನಿಂದ ಒಂದು ಬಾವಿಯನ್ನು ಖರೀದಿಸಿದ್ದ.ಆ ಬಾವಿಯನ್ನು ಕೊಳ್ಳಲು ಹಣ ಕೊಟ್ಟಿದ್ದರೂ ಮತ್ತೆ ನೀರಿಗೂ ಹಣ ಕೊಡು ಎಂದು ಹಟ ಮಾಡುತ್ತಿದ್ದ ಆ ಮತ್ತೊಬ್ಬ.ಆಗ ರಾಜ ಅಕ್ಬರ್ ಇದಕ್ಕೆ ತಕ್ಕ ನ್ಯಾಯ ಬೀರಬಲ್ಲನೇ ಕೊಡಬಲ್ಲನೆಂದು ಆತನನ್ನು ಕರೆಸಿದ.ಬೀರಬಲ್ ಕೊಂಚ ಸಮಯ ಯೋಚಿಸಿ "ಅಯ್ಯಾ ನೀನು ಬಾವಿಯನ್ನು ಮಾರಿದೆ ಎಂದು ಹೇಳಿದೆ,ಹಾಗಾದರೆ ಬಾವಿ ಮಾತ್ರ ಆತನಿಗೆ ಸೇರಿದೆ,ನೀರು ನಿನ್ನದು ಇಷ್ಟು ದಿನ ಆ ನೀರನ್ನು ಆತ ತನ್ನ ಬಾವಿಯಲ್ಲಿ ಇಟ್ಟುಕೊಂಡಿದ್ದಕ್ಕೆ ನೀನೇ ಬಾಡಿಗೆ ಕೊಡಬೇಕು,ಇಲ್ಲವೇ ನೀರನ್ನು ಮಾತ್ರ ವಾಪಸ್ ತೆಗೆದುಕೋ"ಎಂದು ಬುದ್ಧಿವಂತಿಕೆಯ ಮಾತನ್ನಾಡಿದ.ಆ ಮಾತನ್ನು ಕೇಳಿ ಆ ಕುಹಕ ಬುದ್ಧಿಯ ರೈತ ತಲೆಬಾಗಿ ಕ್ಷಮೆ ಯಾಚಿಸಿದ.