ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮೊಲಗಳ ಸಾಮ್ರಾಜ್ಯ

picture

ಕಾಡಿನ ಬದಿಯಲ್ಲೇ ಗುಡ್ಡಗಾಡಿನಲ್ಲಿ ಮೊಲಗಳು ಗುಂಪು ಗುಂಪಾಗಿ ವಾಸಿಸುತ್ತಿದ್ದವು. ನರಿ, ಚಿರತೆ, ತೋಳಗಳು ಆ ಗುಂಪಿನ ಮೇಲೆರಗಿ ದಿನಾ ಒಂದೆರಡು ಮೊಲಗಳ ಸಂಖ್ಯೆ ಕಡಿಮೆ ಆಗತೊಡಗಿದವು.ಕಾಡಿನ ಆ ಕ್ರೂರ ಪ್ರಾಣಿಗಳ ಆಕ್ರಮಣಕ್ಕೆ ಭಯದಿಂದ ಹೆದರಿದ ಮೊಲಗಳು ತಮಗಿನ್ನು ಉಳಿಗಾಲವಿಲ್ಲವೆಂದು ನಿರ್ಧರಿಸಿ ಒಮ್ಮೆಲೇ ಎಲ್ಲಾ ಮೊಲಗಳು ನೀರಿನಲ್ಲಿ ಧುಮುಕಿ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದವು. ಹಾಗೆ ಪ್ರಾಣ ಕಳೆದುಕೊಳ್ಳಲು ಮನಸ್ಸು ಮಾಡಿ ಒಂದು ನೀರಿನ ಕೊಳದ ಬಳಿಗೆ ನಡೆದವು.ಆ ಮೊಲಗಳು ನೀರಿನ ಹತ್ತಿರಕ್ಕೆ ಬರುತ್ತಿದ್ದಂತೆಯೇ ಅಲ್ಲೇ ದಡದಲ್ಲಿ ಕುಳಿತಿದ್ದ ಕಪ್ಪೆಗಳು ದಡದಡನೆ ನೀರಿಗೆ ಧುಮುಕಿದವು.ಇದನ್ನು ಕಂಡ ಮೊಲಗಳು "ಅರೆ ನಾವೇ ಹೆದರಿದ್ದೇವೆ ಅಂದುಕೊಂಡಿದ್ದೆವು,ಇಲ್ಲಿ ನಮಗಿಂತಲೂ ಭಯದಿಂದಿರುವವರು ಇದ್ದಾರೆ, ನಮಗಿನ್ನೂ ಬದುಕಲು ಭರವಸೆ ಇದೆ"ಎಂದು ತಮ್ಮ ಬಿಲಗಳಿಗೆ ತೆರಳಿದವು
ನೀತಿ: ನಾವು ಇನ್ನೊಬ್ಬರಿಗೆ ಹೆದರುವಂತೆ,ಆ ಇನ್ನೊಬ್ಬರೂ ಮತ್ತೊಬ್ಬರಿಗೆ ಹೆದರುತ್ತಾರೆ

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023