ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಜಾಣತನ

picture

ದೊಡ್ಡದೊಂದು ಕೆರೆಯಲ್ಲಿ ಶತಬುದ್ಧಿ ಮತ್ತು ಸಹಸ್ರಬುದ್ಧಿ ಎಂಬ ಎರಡು ದೊಡ್ಡ ಮೀನುಗಳಿದ್ದವು.ಅದೇ ಕೆರೆಯಲ್ಲಿ ಏಕಬುದ್ಧಿ ಎಂಬ ಕಪ್ಪೆಯೂ ವಾಸವಾಗಿತ್ತು.ಅವೆಲ್ಲಾ ಸ್ನೇಹಿತರೇ ಆಗಿದ್ದರು.ಒಮ್ಮೆ ಮೀನುಗಾರರು ಕೆರೆಯೆಬಳಿ ನಿಂತು ಮಾರನೆಯದಿನ ಬಲೆ ಬೀಸಲು ಯೋಜನೆ ಹಾಕಿದ್ದರು.ಇದನ್ನು ಆಲಿಸಿದ ಕಪ್ಪೆ ಭಯದಿಂದ ವಿಷಯವನ್ನು ಮೀನುಗಳಿಗೆ ತಿಳಿಸಿತು.ಶತಬುದ್ಧಿ ಮತ್ತು ಸಹಸ್ರಬುದ್ಧಿ ಮೀನುಗಳು "ಅಯ್ಯಾ ಏಕಬುದ್ಧಿ ಈ ಮನುಷ್ಯರಿಗೆ ಹೇಳಿದ್ದನ್ನೆಲ್ಲಾ ಮಾಡಲು ಆಗುವುದಿಲ್ಲ, ಅವರಿಗೆ ಹೆದರಿ ಬೇರೆಡೆ ಹೋಗಬೇಡ,ಅವರು ಬಂದರೆ ನಾನು ನೋಡಿಕೊಳ್ಳುತ್ತೇನೆ"ಎಂದು ಧೈರ್ಯ ಹೇಳಿತು.ಆದರೆ ಕಪ್ಪೆ ತಾನೇ ಕಣ್ಣಾರೆ ಮನುಷ್ಯರು ಮಾಡುವ ಚಮತ್ಕಾರಗಳನ್ನೆಲ್ಲಾ ಈ ಮೊದಲು ನೋಡಿತ್ತು.ಅಂದು ಸಂಜೆ ಜಿಗಿದು ಬೇರೆಡೆ ಅವಿತುಕೊಂಡಿತು.ಆ ರಾತ್ರಿಯೇ ಮೀನುಗಾರರು ಬಲೆ ಬೀಸಿ ಹೋಗಿದ್ದರು.ಮರುದಿನ ಸುಲಭವಾಗಿ ಮೀನುಗಳು,ಆಮೆ,ಏಡಿ ಮುಂತಾದ ಜಲಚರಗಳನ್ನು ಹಿಡಿದು ಬುಟ್ಟಿಯೊಳಗೆ ತುಂಬಿಕೊಂಡು ಹೋದರು.ಅದರ ಜೊತೆಗೆ ಶತಬುದ್ಧಿ ಮತ್ತು ಸಹಸ್ರಬುದ್ಧಿ ಯನ್ನೂ ಬೊಂಬುಗಳಿಗೆ ತೂಗುಹಾಕಿಕೊಂಡು ಹೋದರು. ಏಕಬುದ್ಧಿ ಮರದ ಹಿಂದೆ ಕುಳಿತು ತನ್ನ ಗೆಳೆಯರ ಅಂತ್ಯವನ್ನು ಗಮನಿಸಿತು.
ನೀತಿ: ವಿದ್ಯೆಗಿಂತ ಬುದ್ಧಿ ಲೇಸು, ಆದರೆ ಬುದ್ಧಿಗಿಂತ ಜಾಣತನ ಲೇಸು.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023