ಜಾಣತನ

ದೊಡ್ಡದೊಂದು ಕೆರೆಯಲ್ಲಿ ಶತಬುದ್ಧಿ ಮತ್ತು ಸಹಸ್ರಬುದ್ಧಿ ಎಂಬ ಎರಡು ದೊಡ್ಡ ಮೀನುಗಳಿದ್ದವು.ಅದೇ ಕೆರೆಯಲ್ಲಿ ಏಕಬುದ್ಧಿ ಎಂಬ ಕಪ್ಪೆಯೂ ವಾಸವಾಗಿತ್ತು.ಅವೆಲ್ಲಾ ಸ್ನೇಹಿತರೇ ಆಗಿದ್ದರು.ಒಮ್ಮೆ ಮೀನುಗಾರರು ಕೆರೆಯೆಬಳಿ ನಿಂತು ಮಾರನೆಯದಿನ ಬಲೆ ಬೀಸಲು ಯೋಜನೆ ಹಾಕಿದ್ದರು.ಇದನ್ನು ಆಲಿಸಿದ ಕಪ್ಪೆ ಭಯದಿಂದ ವಿಷಯವನ್ನು ಮೀನುಗಳಿಗೆ ತಿಳಿಸಿತು.ಶತಬುದ್ಧಿ ಮತ್ತು ಸಹಸ್ರಬುದ್ಧಿ ಮೀನುಗಳು "ಅಯ್ಯಾ ಏಕಬುದ್ಧಿ ಈ ಮನುಷ್ಯರಿಗೆ ಹೇಳಿದ್ದನ್ನೆಲ್ಲಾ ಮಾಡಲು ಆಗುವುದಿಲ್ಲ, ಅವರಿಗೆ ಹೆದರಿ ಬೇರೆಡೆ ಹೋಗಬೇಡ,ಅವರು ಬಂದರೆ ನಾನು ನೋಡಿಕೊಳ್ಳುತ್ತೇನೆ"ಎಂದು ಧೈರ್ಯ ಹೇಳಿತು.ಆದರೆ ಕಪ್ಪೆ ತಾನೇ ಕಣ್ಣಾರೆ ಮನುಷ್ಯರು ಮಾಡುವ ಚಮತ್ಕಾರಗಳನ್ನೆಲ್ಲಾ ಈ ಮೊದಲು ನೋಡಿತ್ತು.ಅಂದು ಸಂಜೆ ಜಿಗಿದು ಬೇರೆಡೆ ಅವಿತುಕೊಂಡಿತು.ಆ ರಾತ್ರಿಯೇ ಮೀನುಗಾರರು ಬಲೆ ಬೀಸಿ ಹೋಗಿದ್ದರು.ಮರುದಿನ ಸುಲಭವಾಗಿ ಮೀನುಗಳು,ಆಮೆ,ಏಡಿ ಮುಂತಾದ ಜಲಚರಗಳನ್ನು ಹಿಡಿದು ಬುಟ್ಟಿಯೊಳಗೆ ತುಂಬಿಕೊಂಡು ಹೋದರು.ಅದರ ಜೊತೆಗೆ ಶತಬುದ್ಧಿ ಮತ್ತು ಸಹಸ್ರಬುದ್ಧಿ ಯನ್ನೂ ಬೊಂಬುಗಳಿಗೆ ತೂಗುಹಾಕಿಕೊಂಡು ಹೋದರು. ಏಕಬುದ್ಧಿ ಮರದ ಹಿಂದೆ ಕುಳಿತು ತನ್ನ ಗೆಳೆಯರ ಅಂತ್ಯವನ್ನು ಗಮನಿಸಿತು.
ನೀತಿ: ವಿದ್ಯೆಗಿಂತ ಬುದ್ಧಿ ಲೇಸು, ಆದರೆ ಬುದ್ಧಿಗಿಂತ ಜಾಣತನ ಲೇಸು.