ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದೇವರು ಎಲ್ಲಿದ್ದಾನೆ?

picture

ಗಿರಾಕಿಯೊಬ್ಬ ಹಜಾಮರ ಅಂಗಡಿಗೆ ಹೋಗಿ ತಲೆ ಕೂದಲನ್ನು ತುಂಡರಿಸಿಕೊಳ್ಳಲು ಕುಳಿತ.ಎಂದಿನಂತೆ ಹಜಾಮ ಏನಾದರೊಂದು ವಿಷಯ ತೆಗೆದು ಗಿರಾಕಿಗಳನ್ನು ಮಾತನಾಡಿಸುವುದು ರೂಢಿ.ಅಂದು"ಏss ದೇವರೆಲ್ಲಿದ್ದಾನೆ ಸ್ವಾಮಿ,? ಇಲ್ಲ,ಇದ್ದಿದ್ದ್ರೆ ಪ್ರಪಂಚದಲ್ಲಿ ಇಷ್ಟೊಂದು ಬಡವರು, ರೋಗಿಗಳು ಯಾಕೆ ಇರ್ತಿದ್ರು?"ಅಂದ.ಸರಿ ಕೆಲಸ ಮುಗಿದ ಮೇಲೆ ಗಿರಾಕಿ ಬಾಗಿಲು ತೆರೆದು ಹೊರಗೆ ಹೊರಟ. ಎದುರುರಿನಲ್ಲೇ ಒಬ್ಬ ಗಡ್ಡಧಾರಿ ನಡೆದು ಹೋಗುತ್ತಿದ್ದ.ಅದನ್ನು ಕಂಡು ಹಜಾಮನನ್ನು ಕರೆದು"ನೋಡು ಈ ಪ್ರಪಂಚದಲ್ಲಿ ಹಜಾಮರೇ ಇಲ್ಲ" ಎಂದ. ಅದಕ್ಕೆ ಅವನು"ಅರೆ ಏನ್ ಸ್ವಾಮಿ ಇಲ್ಲೇ ಇದ್ದೀನಿ ಏನು ಹೀಗಂತೀರಾ?" ಎಂದ."ಇದ್ದಿದ್ದ್ರೆ ಅವನು ಯಾಕೆ ಗಡ್ಡ ಬಿಟ್ಟುಕೊಂಡು ಓಡಾಡ್ತಿದ್ದಾನೆ?" ಎಂದು ಪ್ರಶ್ನಿಸಿದ". ಅದಕ್ಕೆ ಆ ಹಜಾಮ "ಅರೆ ಅವರಿಗೆ ಹಜಾಮ ಬೇಕಿದ್ದರೆ ನನ್ನ ಬಳಿ ಬರಬೇಕಪ್ಪಾ" ಎಂದು ಹೇಳುವಾಗಲಷ್ಟರಲ್ಲೇ ದೇವರ ಬಗ್ಗೆಯೂ ತಾನು ಹೇಳಿದ್ದ ನಂಬಿಕೆಯ ಮಾತು ಅರಿಯಾಯಿತು.ನಕ್ಕು ಕೆಲಸ ಮುಂದುವರೆಸಿದ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023