ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಆಸ್ತಿ

picture

ದೊಡ್ಡ ಪಟ್ಟಣದ ಬಲು ಶ್ರೀಮಂತ ಕುಟುಂಬದ ಒಬ್ಬ ತಂದೆ ತನ್ನ ಮಗನಿಗೆ ಬಡತನದ ಅರಿವಾಗಲೆಂದು ದೂರದ ಹಳ್ಳಿಗೆ ಕರೆದೊಯ್ದ.ಅಲ್ಲಿ ನಾಲ್ಕಾರು ದಿನ ಕಳೆದು ಮರಳಿ ಮನೆಗೆಬಂದ ನಂತರ ತಂದೆ ಮಗನನ್ನು ಕೇಳಿದ "ಹೇಗಿತ್ತು ಮಗು ಹಳ್ಳಿ ಜೀವನ? ನೋಡಿದೆಯಾ ಬಡತನ ಅಂದರೆ ಏನೂ ಅಂತಾ?"ಎಂದ.ಮಗ "ಹೌದು"ಎಂದು ಸಪ್ಪೆಯಾಗಿ ಉತ್ತರಿಸಿದ.ತಂದೆ ಮತ್ತೆ"ಇದರಿಂದ ಏನು ಪಾಠ ಕಲಿತೆ ನೀನು?"ಎಂದು ಪ್ರಶ್ನಿಸಿದ.ಅದಕ್ಕೆ ಮಗ"ಹೌದಪ್ಪಾ ನೋಡಿದೆ ನಮ್ಮ ಮನೆಯಲ್ಲಿ ಒಂದು ನಾಯಿಯಿದೆ ಅವರಿಗೆ ಆರೆಂಟು ಇವೆ,ನಮಗೆ ಈಜಲು ಪುಟ್ಟ ಪೂಲ್ ಇದೆ ಅವರಿಗೆ ದೊಡ್ಡ ಕೆರೆಯೇ ಇದೆ,ನಮಗೆ ಅಂಗಳದಲ್ಲಿ ವಿದೇಶಿ ಲಾಟಿನ್ ಇವೆ,ಅವರಿಗೆ ನಕ್ಷತ್ರಗಳೇ ಇವೆ,ನಮಗೆ ಆಡಲು ಬೇಲಿಯವರೆಗೆ ಅಂಗಳ ಇದೆ ಅವರಿಗೆ ಕಣ್ಣು ಹರಿಯುವಷ್ಟೂ ಅಂಗಳವೇ,ನಮಗೆ ದೊಡ್ಡ ಮನೆಯಿದೆ ಅವರಿಗೆ ತೋಟ,ಹೊಲ,ಗದ್ದೆ,ಬಯಲು ಎಲ್ಲಾ ಇವೆ,ನಮ್ಮನ್ನು ರಕ್ಷಿಸಲು ಸುತ್ತಲೂ ಗೋಡೆಗಳಿವೆ ಅವರ ಸುತ್ತಲೂ ಬರೀ ಗೆಳೆಯರೇ ಇದ್ದಾರೆ".ಇಷ್ಟು ಕೇಳಿದ ತಂದೆಯ ಮುಖ ಮುದುಡಿತು.ಮಗ ಮತ್ತೊಂದು ಮಾತು ಹೇಳಿದ"ಅಪ್ಪಾ ತುಂಬಾ ಥ್ಯಾಂಕ್ಸ್ ಅಪ್ಪ ನಾವೆಷ್ಟು ಬಡವರೆಂದು ನನಗೆ ಈಗ ಅರಿವು ಮಾಡಿಕೊಟ್ಟಿದ್ದಕ್ಕೆ."ಎಂದು ಹೇಳಿದ.

ನೀತಿ: ಪ್ರತಿಯೊಂದು ವಿಷಯವನ್ನು ಬೇರೊಂದು ದೃಷ್ಟಿಯಿಂದಲೂ ನೋಡಬಹುದು, ಮಕ್ಕಳಿಗೆ ಅರಿವು ಮೂಡಿಸುವುದು ಸುಲಭದ ಕೆಲಸವಲ್ಲ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026