ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಯಾರು ಹೆಚ್ಚು

picture

ಒಂದು ಸಿಂಹ ಹಾಗು ಒಬ್ಬ ಮಾನವ ಸ್ನೇಹದಿಂದ ಬಾಳುತ್ತಿದ್ದರು.ಒಮ್ಮೆ ಇಬ್ಬರೂ ಕಾಡಿನ ಹಾದಿಯಲ್ಲಿ ನಡೆಯುತ್ತಿದ್ದರು.ಹಾಗೇ ಮಾತಿಗೆ ಮಾತು ಬೆಳೆದು ಒಬ್ಬರಿಗಿಂತ ಒಬ್ಬರು ತಮ್ಮ ಸಾಮರ್ಥ್ಯವನ್ನು ಕೊಚ್ಚಿಕೊಳ್ಳತೊಡಗಿದರು. ಹಾಗೆ ಸಾಗಿರಲು ಒಂದು ಕಲ್ಲಿನ ಶಿಲೆ ಕಂಡಿತು.ಅದು ಓರ್ವ ಮಾನವ ತನ್ನ ತೋಳ್ಬಲದಿಂದ ಸಿಂಹವನ್ನು ನೆಲಕ್ಕಪ್ಪಳಿಸಿ ಒಂದು ಕೈಯಿಂದ ಅದನ್ನು ಅದುಮಿ ಹಿಡಿದು ಮತ್ತೊಂದು ಕೈ ಮೇಲೆತ್ತಿ ಅದನ್ನು ಜಜ್ಜಿ ಹಾಕುವಂತೆ ಕೆತ್ತಲಾಗಿತ್ತು.ಅದನ್ನು ತೋರಿಸಿ ಮಾನವನು "ನೋಡಿದೆಯಾ ಸಿಂಹ ಮಾನವನ ಮುಂದೆ ಮೃಗರಾಜನೂ ಏನೂ ಇಲ್ಲ"ಎಂದ.ತಕ್ಷಣ ಸಿಂಹ ಅವನ ಮೇಲೆರಗಿ ಹಿಂಗಾಲುಗಳಿಂದ ಅವನನ್ನು ಹಿಡಿದು ಮುಂಗಾಲುಗಳಿಂದ ಸಿಗಿದು ಹಾಕುವ ಹಾಗೆ ಘರ್ಜಿಸಿ ನಿಂತಿತು." ಮಾನವ ಇದನ್ನು ಕೆತ್ತಿದವನು ಮಾನವ,ಸಿಂಹಕ್ಕೂ ಕೆತ್ತನೆ ಕೆಲಸ ತಿಳಿದಿದ್ದರೆ ಆ ಶಿಲೆ ಹೀಗಿರುತ್ತಿತ್ತು ಎಂದು ಹೇಳಿ ಏನೂ ಮಾಡದೆ ಮುಂದೆ ಸಾಗಿತು.
ಕಥೆ ಕೇಳಲು ಬಲು ಚೆನ್ನ..........ಆದರೆ ಮತ್ತೊಂದು ಹೇಳುವವರೆಗೂ ಅಷ್ಟೆ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023