ಆಸೆ - ಆತುರ

ಜೇನುತುಪ್ಪ ಜಾಡಿಗಳಲ್ಲಿ ಇಡುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ.ಒಂದು ಮನೆಯಲ್ಲಿ ಒಮ್ಮೆ ಜಾಡಿ ಅಕಸ್ಮಾತ್ ಜಾರಿ ಬಿದ್ದು ಜೇನುತುಪ್ಪ ನಿಧಾನವಾಗಿ ನೆಲಕ್ಕೆ ಹರಿಯಿತು.ಮನೆಯಲ್ಲಿದ್ದ ನೊಣಗಳು ಅದರ ವಾಸನೆಗೆ ಹಿಂಡು ಹಿಂಡಾಗಿ ಹಾರಿಬಂದು ಅದರ ಮೇಲೆ ಕುಳಿತು ಸವಿಯಲು ಆರಂಭಿಸಿದವು.ಅವುಗಳ ಕಾಲು ಜೇನಿನತುಪ್ಪದಲ್ಲಿ ಒದ್ದೆಯಾಗಿ ಮುಳುಗಲು, ರೆಕ್ಕೆಗಳೂ ಸಹ ಜೇನಿಗೆ ಅಂಟಿ ನೊಣಗಳು ಹಾರದಂತೆ ಆಯಿತು.ಆಗಾಗಲೆ ಅವುಗಳಿಗೆ ತಮ್ಮ ತಪ್ಪು ಅರಿವಾಗಿತ್ತು ಆದರೆ ಏನು ಮಾಡುವುದು ಬಹಳ ತಡವೂ ಆಗಿತ್ತು. ಜೇನುತುಪ್ಪ ತಿನ್ನುವ ಆಸೆಯಿಂದ ಆತುರ ಪಟ್ಟಿದ್ದು ಪ್ರಾಣಕ್ಕೆ ಆಪತ್ತಾಯಿತು. ನೀತಿ:ಅಸೆಯೇ ಅವನತಿಗೆ ಕಾರಣ.