ಕೊಡಲಿಗಳು

ತಿಮ್ಮನ ಕಬ್ಬಿಣದ ಕೊಡಲಿ ಬಾವಿಗೆ ಬಿದ್ದಾಗ ದೇವರನ್ನು ಆತ ಪ್ರಾರ್ಥಿಸಿ ದೇವನು ಪ್ರತ್ಯಕ್ಷನಾಗಿ ಆತನಿಗೆ ಮೊದಲು ಚಿನ್ನದ ಕೊಡಲಿ, ನಂತರ ಬೆಳ್ಳಿಯ ಕೊಡಲಿ, ಆ ನಂತರ ಕಬ್ಬಿಣದ ಕೊಡಲಿ ತರಲು ತಿಮ್ಮ ತನ್ನ,ಕೊಡಲಿ ಯಾವುದೆಂದು ನಿಜ ನುಡಿಯಲು ದೇವನು ಎಲ್ಲಾ ಕೊಡಲಿಗಳನ್ನು ದಯಪಾಲಿಸಿದ ಕಥೆ ಎಲ್ಲರಿಗೂ ಗೊತ್ತೇ ಇದೆ. ಅದೇ ತಿಮ್ಮ ತನ್ನ ಹೆಂಡತಿಯೊಡನೆ ಅದೇ ಬಾವಿಯ ಬಳಿ ಕುಳಿತಿರಲು ಅವರಿಬ್ಬರ ನಡುವೆ ಮಾತು ಬೆಳೆದು ಜಗಳಕ್ಕಿಳಿದು ತಿಮ್ಮ ತನ್ನ ಹೆಂಡತಿಯನ್ನು ಅಕಸ್ಮಾತ್ ತಳ್ಳಿ ಆಕೆ ಬಾವಿಯಲ್ಲಿ ಬಿದ್ದಳು. ಆಗ ತಿಮ್ಮ ಗಾಬರಿಯಿಂದ ಅಯ್ಯೋ ದೇವರೇ ಎಂದು ಹಿಂದಿನಂತೆ ಮೊರೆಯಿಡಲು ಅದೇ ದೇವನು ಮತ್ತೆ ತಿಮ್ಮನ ಕರೆಗೆ ಓಗೊಟ್ಟು ಮರಳಿ ಬಂದನು.ತಿಮ್ಮ ನಡೆದುದ್ದೆಲ್ಲಾ ವಿವರಿಸಲು ದೇವನು ತಿಮ್ಮನಿಗೆ ಸ್ವಲ್ಪ ತಾಳೆಂದು ಹೇಳಿ ಬಾವಿಯೊಳಗೆ ಹೋಗಿ ಐಶ್ವರ್ಯ ರೈ ಳನ್ನು ಕರೆತಂದನು. ತಕ್ಷಣ ತಿಮ್ಮ "ಈಕೇನೇ ನನ್ನ ಹೆಂಡತಿ" ಎಂದು ಅವಸರದಿ ಹೇಳಿದ. ದೇವನು "ಎಲೈ ತಿಮ್ಮ ಈ ಸುಂದರಿಯನ್ನು ಕಂಡಕೂಡಲೇ ಈಕೆಯೇ ನನ್ನ ಹೆಂಡತಿ ಅನ್ನುತ್ತಿರುವೆಯಾ" ಎಂದನು.ಅದಕ್ಕೆ ತಿಮ್ಮ ಶಾಂತವಾಗಿ ಉತ್ತರವಿತ್ತ "ಸ್ವಾಮೀ ಈಕೆಯನ್ನು ನನ್ನಕೆಂಡತಿಯಲ್ಲ ಅಂದರೆ ನೀವು ಒಳಗೆ ಹೋಗಿ ಶ್ರೀದೇವಿಯನ್ನು ಕರೆತರುವಿರಿ,ನಂತರ ನನ್ನ ಹೆಂಡತಿಯನ್ನು ತಂದಾಗ ನಿಜವನ್ನು ಹೇಳಿದಾಗ ಮೂವರನ್ನೂ ನನಗೇ ಕೊಡುವೆ.ಒಬ್ಬಳ ಕಾಟವೇ ಸಾಕಾಗಿ ಹೋಗಿದೆ ಅದಕ್ಕೆ ಈ ಒಬ್ಬಳೇ ಸಾಕು ಸ್ವಾಮಿ"ಎನ್ನಬೇಕೇ!!!