ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೆಂಕಿ-ಗಾಳಿ !

picture

ಚೀನಾ ದೇಶದ ಒಂದು ಹಳ್ಳಿಯಲ್ಲಿ ಒಬ್ಬ ಗಂಡನಿಲ್ಲದ ಮುದುಕಿಗೆ ಇಬ್ಬರು ಗಂಡು ಮಕ್ಕಳು. ಅವಳ ಸೊಸೆಯರು ತಮ್ಮ ತವರೂರಿಗೆ ಹೋಗಿ ಬರಲು ಅತ್ತೆಯ ಬಳಿ ಕೋರಿಕೊಂಡರು.ಮುದುಕಿಗೆ ಅವರನ್ನು ಕಳಿಸಲು ಇಷ್ಟವಿರಲಿಲ್ಲ."ನೀವು ನಿಮ್ಮ ಅಮ್ಮನ ಮನೆಗೆ ಹೋಗಿ ಬರಲು ನನಗೆ ಅಭ್ಯಂತರವಿಲ್ಲ ಆದರೆ ಹಿಂತಿರುಗಿ ಬರುವಾಗ ದೊಡ್ದ ಸೊಸೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿಯನ್ನೂ, ಚಿಕ್ಕ ಸೊಸೆ ಕಾಗದದಲ್ಲಿ ಸುತ್ತಿಟ್ಟ ಗಾಳಿ ಈ ಎರಡೂ ಉಡುಗೊರೆಯನ್ನು ತರಬೇಕು, ಇಲ್ಲದಿದ್ದರೆ ಇಲ್ಲಿಗೆ ಬರಲೇಬೇಡಿ"ಎಂದು ಶರತ್ತು ಹಾಕಿದಳು. ತಮ್ಮ ತವರೂರಿಗೆ ಹೋಗುವ ತವಕದಲ್ಲಿ ಅವರೂ ಸಹ ಅದಕ್ಕೆ ಒಪ್ಪಿ ಹೊರಟರು. ಊರಿನಲ್ಲಿ ತಮ್ಮ ನಂಟರೂ ಇಷ್ಟರೂ ಎಲ್ಲರೊಡನೆ ಸಂತೋಷದಿಂದ ಕಾಲ ಕಳೆದು ಹಿಂತಿರುಗಿ ಬರುವಾಗ ಅವರಿಗೆ ಅತ್ತೆ ಹೇಳಿದ್ದ ಮಾತು ನೆನೆಪಿಗೆ ಬಂದಿತು. ತಲೆಯ ಮೆಲೆ ಕೈಯಿಟ್ಟು ಆಲೋಚನೆ ಮಾಡುತ್ತಾ ಕುಳಿತರು.ಆ ವೇಳೆಗೆ ಸರಿಯಾಗಿ ವಾಂಗ್ ಚೂ ಎನ್ನುವ ಜಾಣ ರೈತ ಅವರನ್ನು ಕಂಡು,ಅವರ ಕಷ್ಟ ವಿಚಾರಿಸಿದ.ಸ್ವಲ್ಪ ಕಾಲ ಆತನೂ ಆಲೋಚಿಸಿ ನಂತರ ಜಾಣ್ಮೆಯಿಂದ ಅವರಿಗೆ ಬೇಕಿದ್ದ ಉಡುಗೊರೆಗಳನ್ನು ಅವರ ಕೈಗಿಟ್ಟ. ಅದನ್ನು ಸಂತೋಷದಿಂದ ತಂದು ಸೊಸೆಯರು ಅತ್ತೆಗೆ ಒಪ್ಪಿಸಿದರು.ಮುದುಕಿಗೆ ಆಶ್ಚರ್ಯ ಯಾವ ಕೆಲಸವು ಅಸಾಧ್ಯ ಎಂದುಕೊಂಡಿದ್ದಳೋ ಸೊಸೆಯರಿಗೆ ಸುಲಭವಾಗಿ ಸಾಧ್ಯವಾಯಿತು.ಆದರೆ ಅವರಿಗೆ ಸಹಾಯ ಮಾಡಿದ ವಾಂಗ್ ಚೂ ವಿಚಾರ ಮುದುಕಿಯ ಬಳಿ ಬಾಯಿ ಬಿಡಲಿಲ್ಲ. ವಾಂಗ್ ಚೂ ದೊಡ್ದ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿಗೆ - ಚೈನೀಸ್ ಲಾಟಿನ್ ಮತ್ತು ಚಿಕ್ಕ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಗಾಳಿಗೆ - ಕೈ ಬೀಸಣಿಗೆ ಕೊಟ್ಟಿದ್ದ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023