ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

Robot

picture

ಪುಟ್ಟ ಕಿಟ್ಟಿ ಓದಿನಲ್ಲಿ ಬಹಳ ಚುರುಕು ಆಟದಲ್ಲೂ ಚೂಟಿ.ಆದರೆ ತನ್ನ ಕೋಣೆಯನ್ನು ಸ್ವಚ್ಚವಾಗಿಡುವುದರಲ್ಲಿ ಮಾತ್ರ ಹಿಂದು.ಆತನ ಹತ್ತನೇ ಹುಟ್ಟು ಹಬ್ಬಕೆ ಅವನ ತಂದೆ ದುಬಾರಿ ಬೆಲೆಯ ಒಂದು ರೋಬೋಟ್ ತಂದು ಕೊಟ್ಟರು.ಅದೆಕ್ಕೆ ನೆಲದಲ್ಲಿದ್ದ ಬೇಡದ ವಸ್ತುಗಳನ್ನು ಕಸದ ಡಬ್ಬಿಗೆ ಹಾಕಬಲ್ಲ ಶಕ್ತಿ ಉಳ್ಳದ್ದಾಗಿತ್ತು.ಅದನ್ನು ಕಂಡು ಕಿಟ್ಟಿಗೆ ಬಹಳ ಸಂತೋಷವಾಯಿತು. ಮಾರನೆಯ ದಿನ ಬೆಳಗ್ಗೆ ಎದ್ದು ನೋಡಲು ತನ್ನ ಚೆಂಡು,ಕಾರು ಎಲ್ಲಾ ಕಾಣೆಯಾಗಿತ್ತು.ಈ ರೋಬೋಟ್ ತನ್ನ ವಸ್ತುಗಳನ್ನು ಕದಿಯುತ್ತಿದೆ ಎಂದು ಶಂಕಿಸಿ ಮರುದಿನ ರಾತ್ರಿ ಎಚ್ಚರವಿದ್ದು ನೋಡಲು ರೋಬೋಟ್ ಕೆಲ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿತು.ಕೂಡಲೇ ತನ್ನ ತಂದೆಯ ಬಳಿಗೆ ಹೋಗಿ ಕಿಟ್ಟಿ"ಅಪ್ಪಾ ನೋಡು ಈ ರೋಬೋಟ್ ನನ್ನ ಆಟದ ಸಾಮಾನು,ಹೊದ್ದಿಗೆ,ಚಪ್ಪಲಿ ಎಲ್ಲಾ ತೆಗೆದು ಕಸದ ಬುಟ್ಟಿಯಲ್ಲಿ ಹಾಕುತ್ತಿದೆ"ಎಂದು ತಂದೆಗೆ ಬುಟ್ಟಿಯನ್ನು ತೋರಿಸಿದ.ತಂದೆ ನಿಧಾನವಾಗಿ ರೋಬೋಟ್ ಗೆ "ನೀನು ಏಕೆ ಹಾಗೆಮಾಡುತ್ತಿರುವೆ"ಎಂದು ಪ್ರಶ್ನೆ ಹಾಕಿದ.ಅದಕ್ಕೆ ರೋಬೋಟ್ ಹೇಳಿತು"ನನ್ನನ್ನು ಹಾಗೇ ಪ್ರೋಗ್ರಾಮ್ ಮಾದಲಾಗಿದೆ.ಮನುಷ್ಯರಿಗೆ ಬೇಡದ ನೆಲದಮೇಲೆ ಬಿದ್ದ ವಸ್ತುಗಳನ್ನು ಬಡಜನರಿಗೆ ದಾನಮಾಡಲು ಇಟ್ಟಿರುವ ಬುಟ್ಟಿಗೆ ಹಾಕುವುದು ನನ್ನ ಕೆಲಸ"ಎಂದು. ತಕ್ಷಣ ಕಿಟ್ಟಿಗೆ ತನ್ನ ತಪ್ಪು ಅರಿವಾಯಿತು.ತನ್ನ ಕೋಣೆ ಚೊಕ್ಕಟವಾಗಿ ಇಟ್ಟುಕೊಳ್ಳದ ಕಾರಣ ನನ್ನ ತಂದೆ ಬುದ್ಧಿ ಕಲಿಸಲು ಮಾಡಿರುವ ಉಪಾಯ ಎಂದು ಅರಿತು ಅಂದಿನಿಂದ ಚೂಟಿ ಮಾತ್ರ ಆಗಿರದೆ ಚೊಕ್ಕಟವಾಗಿಯೂ ಆದನು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2019