ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಿವುಡು

picture

 ಜಪಾನಿನ ಪುಟ್ಟ ಹಳ್ಳಿಯಲ್ಲಿ ಕಟ್ಸೂ ಎಂಬ ಪುಟ್ಟ ಹುಡುಗನಿದ್ದ.ಆತ ಹುಟ್ಟು ಕಿವುಡ.ಸುತ್ತಲೂ ಇದ್ದ ಜನ ಆತನನ್ನು ಅತಿ ಗಮನ ಕೊಟ್ಟು ನೋಡಿಕೊಳ್ಳುತ್ತಿದ್ದರು.ಆತನಿಗೆ ಹತ್ತು ವರ್ಷವಾದರೂ ಪುಟ್ಟ ಮಗುವಿನಂತೆ ಕಾಣುತ್ತಿದ್ದರು.ಆದರೆ ಆತನಿಗೆ ಅದು ಇಷ್ಟವಿರಲಿಲ್ಲ.ಎಲ್ಲರಂತಿರಬೇಕು ಎನ್ನುವ ಆಸೆ. ಅದರೆ ಎಲ್ಲರೂ ಅವನನ್ನು ಅಂಗವಿಕಲನಂತೆ ಕಾಣುತ್ತಿದ್ದರು. ಇದು ಆತನ ಗೆಳೆಯನಿಗೆ ಅರ್ಥವಾಯಿತು.ಆ ಗೆಳೆಯ ಕಟ್ಸೂ ನ ತಂದೆಯಲ್ಲು ಕರೆದು ವಿವರಿಸಿದ.ಕಟ್ಸೂ ನ ತಂದೆ ಅಲ್ಲಿನ ಮೇಯರ್ ಆಗಿದ್ದ.ಹಳ್ಳಿಗೆ ದೊಡ್ಡ ವ್ಯಕ್ತಿ.ಈ ವರ್ಷ ಒಂದುದಿನ ಊರಿನವರೆಲ್ಲಾ ಕಿವಿಗೆ ಪ್ಲಗ್ ಹಾಕಿಕೊಳ್ಳಬೇಕು ಎಮ್ದು ಆಜ್ಞೆ ಹೊರಡಿಸಿದ.ಆದಿನ ಹಳ್ಳಿಯವರೆಲ್ಲಾ ಕಿವಿಗೆ ಪ್ಲಗ್ ಚುಚ್ಚಿಕೊಂಡು ಪಾಲಿಸಿದರು.ಎಲ್ಲರಿಗೂ ಮೊದಲು ಸಂಭ್ರಮ ಎನಿಸಿತು ನಂತರ ಕಷ್ತವಾಗುತ್ತಾ ಬಂದಿತು.ಮಾತಿಲ್ಲದೇ ಮೂಕಾಭಿನಯದಿಂದ ಸಂಹವಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.ಆದರೆ ಕಟ್ಸೂ ಮಾತ್ರ ಸುಲಭವಾಗಿ ಚಿಹ್ನೆಮೂಲಕ ತನಗೆ ಬೇಕಿದ್ದನ್ನು ಸುಲಭವಾಗಿ ಹೇಳುತ್ತಿದ್ದ. ಜನ ಮರುದಿನದಿಂದ ಆತನನ್ನು ಮೊದಲಿಗಿಂತ ವಿಭಿನ್ನವಾಗಿ ನೋಡತೊಡಗಿದರು.ಕಟ್ಸೂ ಜಾಣನೂ ಮಾತ್ರವಲ್ಲದೆ ಚುರುಕು ಬುದ್ಧಿ ಹಾಗೂ ಸಮಯ ಪ್ರಜ್ಞೆ ಉಳ್ಳವನೂ ಎಂದು ಅವನನ್ನೂ ಎಲ್ಲರಂತೆ ಸಮನಾಗಿ ಕಂಡರು. ಬೇರೊಬ್ಬರಿಗೂ ತಮ್ಮ ಪ್ರತಿಭೆ ತೋರಿಸಲು ಅವಕಾಶ ಕೊಡಬೇಕು ಅನ್ನುವುದನ್ನು ಅಂದಿನಿಂದ ಅರಿತರು ಅಲ್ಲಿನ ಜನ.

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023