ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗುರಿ ಸೇರು

picture

ಹಿಂದೊಮ್ಮೆ, ಬಸ್ಸು, ಟ್ರಕ್ಕು ಇಲ್ಲದ ಕಾಲ, ಆಗ ತೆಂಗಿನಕಾಯಿ ಮೂಟೆಗಳನ್ನು ಕುದುರೆಯ ಮೇಲೆ ಹೊತ್ತ ವ್ಯಾಪಾರಿ ತಿಳಿಯದ ಊರಿಗೆ ಹೊರಟಿದ್ದ. ಸಾಗುತ್ತಿದ್ದ ದಾರಿಯಲ್ಲಿ ಹುಡುಗನೊಬ್ಬನನ್ನು ತಾನು ಸೇರಬೇಕಿರುವ ಊರಿಗೆ ದಾರಿ ಕೇಳಿದ ಹಾಗೇ ಅಲ್ಲಿಗೆ ತಲುಪಲು ಎಷ್ಟು ಸಮಯ ಬೇಕಾಗಬಹುದು ಎಂದೂ ಕೇಳಿದ. ಆಗ ಆ ಹುಡುಗ ಒಮ್ಮೆ ಆತನ ಕುದುರೆಯ ಕಡೆ ನೋಡಿ ಹೇಳಿದ “ ನೀವು ನಿಧಾನವಾಗಿ ನಡೆದು ಹೋದರೆ ಸಂಜೆಯಾಗುವ ಒಳಗೇ ತಲುಪುತ್ತೀರಿ, ಒಂದು ವೇಳೆ ವೇಗವಾಗಿ ಓಡಿಹೋದರೆ ಗುರಿ ಸೇರುವ ಮೊದಲೇ ಕತ್ತಲಾಗಿರಬಹುದು” ಎಂದ. ಹುಡುಗನ ಮಾತು ವ್ಯಾಪಾರಿಗೆ ಅರ್ಥವಾಗಲಿಲ್ಲ. ಅವನ ಮಾತಿಗೆ ಬೆಲೆ ಕೊಡದೇ ತನ್ನ ಕುದುರೆ ಏರಿ ವೇಗವಾಗಿ ಹೊರಟ. ತಲುಪಬೇಕಿದ್ದ ಊರು ದೂರದಿಂದ ಕಂಡಿತು. ಕುದುರೆ ವೇಗವಾಗಿ ಹೆಜ್ಜೆ ಹಾಕಿತು. ಪರವಾಗಿಲ್ಲವೇ ಕತ್ತಲಾಗಲು ಇನ್ನೂ ಮೂರು ನಾಲ್ಕು ತಾಸು ಇರುವಾಗಲೇ ಊರು ಬಂದೇ ಬಿಟ್ಟಿತು ಅಂದುಕೊಂಡು ಒಮ್ಮೆ ತೆಂಗಿನಾಕಾಯಿ ಮೂಟೆಗೆ ಕಾಲಿನಿಂದ ಒದ್ದನು, ಮೂಟೆಯಲ್ಲಿ ಕೆಲವೇ ಕಾಯಿಗಳು ಇದ್ದಂತೆ ಭಾಸವಾಯಿತು. ಕುದುರೆ ನಿಲ್ಲಿಸಿ ಹಿಂದೆ ತಿರುಗಿ ನೋಡಲು ದಾರಿಯುದ್ದಾಕ್ಕೂ ತೆಂಗಿನಕಾಯಿ ಬಿದ್ದಿದ್ದವು, ಮತ್ತೆ ಅದನ್ನೆಲ್ಲಾ ಎತ್ತಿ ಮೂಟೆಗೆ ಹಾಕುವುದು ಸುಲಭವೇ? ಹುಡುಗನು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು.ನಿಧಾನ ವಾಗಿ ನಡೆದು ಬಂದಿದ್ದರೆ ಮೂಟೆಯಿಂದ ಕಾಯಿಗಳು ಉದುರುತ್ತಿರಲಿಲ್ಲ, ಇಂಥಾ ಸಣ್ಣ ವಿಷಯ ಪುಟ್ಟ ಹುಡುಗ ಹೇಳಿದಾಗಲೂ ಅರಿವಾಗಲಿಲ್ಲವಲ್ಲಾ ಎಂದು ವ್ಯಥೆಯಾಯಿತು. ಕಾಯಿಗಳೆಲ್ಲಾ ಆಯ್ದು ಹಿಂತಿರುವ ವೇಳೆಗೆ ಕತ್ತಲು ಕವಿಯಿತು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023